Kavya Poojary

Tragedy Inspirational Others

3  

Kavya Poojary

Tragedy Inspirational Others

ಕವಿ ಮನ

ಕವಿ ಮನ

1 min
186


ಅಂದು ಕಾಲಿಗೊಂದು ಸಣ್ಣ ಮುಳ್ಳು ಚುಚ್ಚಿದರೂ

ಅಳುತಾ ಬೊಬ್ಬಿಡುತಿದ್ದವಳು ನಾನೇನಾ....

ಇಂದು ಮನವನು ಚಾಕುವಿನಿಂದ ತಿವಿದರೂ

ಕೆನ್ನೆಗಿಳಿದ ಕಣ್ಣೀರ ಸುಮ್ಮನೆ ಮರೆಮಾಚುತಿರುವೆನಲ್ಲಾ....


ಅರಳು ಹುರಿದಂತೆ ಮಾತಾಡೋ ಮಾತಿನಮಲ್ಲಿ

ಎಲ್ಲರ ಮನದಲಿ ನಗುವಚೆಲ್ಲಿ

ಮಾಯವಾಗಿ ಹೋದಳೆಲ್ಲಿ...?

ಹುಡುಕಿ ಕರೆತರಲು ಅವಳ ವಿಳಾಸ ಎಲ್ಲಿ?


ಜೀವನದ ಮಜಲುಗಳಲಿ ಮೋಜಿಗಿಂತ

ನೋವೇ ಹೆಚ್ಚು....

ದಿನ ನೋವನುಂಡು ನಗುತಿರಲು

ನನಗಾವ ನಗೆಹುಚ್ಚು....


ಕಣ್ಣೀರ ಬಳಪದಿ 

ಬರೆದಿರುವೆ ನಗುವ ಪದಗಳನು...

ಕೈಯಾರೆ ಅಳಿಸಿರುವೆ 

ನಾ ಕಂಡ ಪುಟ್ಟ ಪುಟ್ಟ ಕನಸುಗಳನು...!



Rate this content
Log in

Similar kannada poem from Tragedy