STORYMIRROR

Kalpana Nath

Comedy Fantasy Others

3  

Kalpana Nath

Comedy Fantasy Others

ಗಣಪತಿಗೆ ಗೊತ್ತಿಲ್ವ !

ಗಣಪತಿಗೆ ಗೊತ್ತಿಲ್ವ !

1 min
33

  


ಮೊದಲು ನಾ ಇದ್ದೆ ದೇವರ ಮನೇಲಿ

ನಂತರ ನನ್ನ ಬಿಟ್ಟರು ರಸ್ತೆ ಬದೀಲಿ

ಆಗ ಮಂತ್ರ ಪೂಜೆ ಹಾಡಿನ ನಿನಾದ 

ಈಗ ತಮಟೆಯ ಯುವಕರ ಉನ್ಮಾದ ll


ಆಗೆಲ್ಲ ಭಕ್ತಿಯಿಂದ ಪೂಜೆ ಪುನಸ್ಕಾರ 

ಈಗಿಲ್ಲಿ ದೊಡ್ಡೋರು ಬಂದ್ರೆ ನಮಸ್ಕಾರ 

ನಾನಂದ್ರೆ ಇತ್ತು ಜನಕ್ಕೆ ಭಯ ಭಕ್ತಿ 

ಈಗ ಚಂದ ವಸೂಲಿಗೆ ಹೊಸ ಶಕ್ತಿ 


ಮೊದಲೆಲ್ಲ ನಾನಂದ್ರೆ ಏನೋ ಭಯ 

ಈಗಂತೂ ನೀವಂದ್ರೆ ನನಗೇ ಭಯ 

ಮಣ್ಣಲ್ಲಿ ಮಾಡಿ ನೀರಲ್ಲಿ ಬಿಡಿ ಅಂದೆ 

ಎಣ್ಣೆ ಹೊಡೀತಾರೆ ಮೆರವಣಿಗೆ ಮುಂದೆ


ಬೇಡಪ್ಪ ಬಿಟ್ಬಿಡಿ ಅಂತೀನಿ ಸಾಕಾಗಿದೆ 

ಹೇಳ್ತಾರೆ ಆಗಲ್ಲ ಇನ್ನೂ ವಸೂಲಿ ಇದೆ


Rate this content
Log in

Similar kannada poem from Comedy