Vaman Acharya

Comedy Drama Others

4  

Vaman Acharya

Comedy Drama Others

ದಂಪತಿ ಅಂದರೆ ಹೀಗಿರಬೇಕು

ದಂಪತಿ ಅಂದರೆ ಹೀಗಿರಬೇಕು

5 mins
232


'ಪೋಸ್ಟ ಪೋಸ್ಟ್ ' ಎಂದು ಹೊರಗಡೆಯಿಂದ ಅಂಚೆ ಪೇದೆ  ಕೂಗಿದ. ಶಕುಂತಲ ಬಾಗಿಲು ತೆಗೆದು ಕವರ್  ತೆಗೆದುಕೊಂಡಳು. ಮತ್ತೆ ಬಾಗಿಲು ಹಾಕುವದನ್ನು ಮರೆಯಲಿಲ್ಲ.  ಪತಿ ಮಧುಸೂದನ ಗೆ ಬಂದ ಪತ್ರ. ರಾಘವಪುರದಲ್ಲಿ ಆಗ ಸಮಯ ಬೆಳಗಿನ ಹತ್ತು ಗಂಟೆ.

ಅದೇ ತಾನೆ  ನಿವೃತ್ತರಾಗಿ ಒಂದು ತಿಂಗಳು ಆಗಿರುವ  ಮಧುಸೂದನ್ ಅವರಿಗೆ ಮನೆಯಲ್ಲಿ ಸಮಯ ಕಳೆಯುವದು ಕಷ್ಟವಾಯಿತು. ಅವರ  ಪತ್ನಿ ಶಕುಂತಲ ಕೂಡಾ ನಿವೃತ್ತರಾಗಿ ಒಂದು ವಾರ. ಪತ್ನಿ ಮನೆ ಕೆಲಸ, ಪುಸ್ತಕ ಓದುವದು ಹಾಗೂ ದೂರದರ್ಶನದ ಕಾರ್ಯ ಕ್ರಮ ನೋಡುವದು ಹಾಗೂ ಫೋನ್ ನಲ್ಲಿ ಮಾತನಾಡುವದು ಇದರಲ್ಲಿ ಇಡೀ ದಿವಸ ಕಳೆದರೆ ಪತಿ ರಾಯ ಸಮಯ ಕಳೆಯುವದು ಪತ್ನಿಯ ತದ್ವಿರುದ್ಧ.  ಅವರಿಗೆ ಮಕ್ಕಳು ಇಲ್ಲದ ಕೊರಗು. 

"ಮಧು, ಎಲ್ಲಿದ್ದಿರಿ? ನಿಮಗೆ ರಜಿಸ್ಟರ್ ಕವರ್ ಬಂದಿದೆ."

 ಮಧುಸೂದನ ಮಹಡಿ ಮೇಲೆ ಇರುವ ಕೋಣೆಯಲ್ಲಿ  ಮೊಬೈಲ್ ನಲ್ಲಿ ಚಲನ ಚಿತ್ರದ ಹಾಡನ್ನು ಜೋರಾಗಿ ಹಚ್ಚಿರುವದರಿಂದ  ಪತ್ನಿ ಕೂಗಿರುವದು ಕೇಳಿಸಲಿಲ್ಲ.  ಪತ್ನಿಗೆ ಸಿಟ್ಟು ಬಂದು ಮೆಟ್ಟಿಲುಗಳನ್ನು ಹತ್ತಿ ನೋಡಿದಾಗ ಪತಿ ಮಹಾಶಯರು ಹಾಡಿನ ಗುಂಗಿನಲ್ಲಿ ಕುಣಿಯುತ್ತ ಇರುವಾಗ ಅವರಿಗೆ ಲುಂಗಿ ಕಳಚಿ ಬಿದ್ದ ಅರಿವೇ ಇರಲಿಲ್ಲ. ಶಕುಂತಲಗೆ ಬಂದಿರುವ ಕೋಪ ಶಮನವಾಗಿ ಎಲ್ಲಿಲ್ಲದ ನಗು ಬಂದು ಮೊದಲು ಆಕೆ ಮೊಬೈಲ್ ಆಫ್ ಮಾಡಿ,

"ಮಧು, ಏನಿದು ನಿಮ್ಮ ಅವತಾರ?  ಮೊದಲು ಲುಂಗಿ ಉಟ್ಟುಕೊಳ್ಳಿ.  ನಿಮಗೆ  ರಜಿಸ್ಟರ್ಡ ಕವರ್ ಬಂದಿದೆ ತಗೊಳ್ಳಿ," ಎಂದಳು.

 ಉತ್ಸುಕತೆಯಿಂದ  ಕವರ್ ನೋಡಲು ಲುಂಗಿ ಧರಿಸಿದೇ  ಕವರ್ ನಲ್ಲಿ ಇರುವದನ್ನು ನೋಡಿದರು. ಅವರ ಮುಖದಲ್ಲಿ ಕಾಣುವ ಮಂದಹಾಸ ಗಮನಿಸಿದ ಶಕುಂತಲ, 

"ಏನ್ರೀ, ಸಂತಸದ ವಿಷಯವೇ? ನಿಮ್ಮ ಸಂತಸದಲ್ಲಿ ನಾನು ಭಾಗಿ ಆಗಬಹುದೇ? ಎಂದಳು.

ಆಕೆ ಎದುರಿಗೆ ನಿಂತಾಗ ಮತ್ತೆ ಅದೇ ಚಲನಚಿತ್ರದ ಹಾಡು ಆನ್ ಮಾಡಿ ಮಡದಿ ಕಡೆ ಕೈ ಮಾಡಿ ನಟನೆ ಮಾಡುತ್ತ, 

'ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ಸೋತೆ ನಾನಾಗ' ಎಂದು ಪತ್ನಿ ಎದುರಿಗೆ ಡಾನ್ಸ ಮಾಡಿದರು. 

"ಶಕು, ನೀನು ನನ್ನ ಸಹಧರ್ಮಿಣಿ. ಈ ಸಂತೋಷ ನಿನ್ನ ಜೊತೆಗೆ ಹಂಚಿಕೊಳ್ಳದೇ ಮತ್ತೆ ಬೇರೆ ಯಾರ ಜೊತೆಗೆ ಹಂಚಿಕೊಳ್ಳಲಿ?"

"ಮಕ್ಕಳ ಹಾಗೆ ವರ್ತಿಸುವದನ್ನು ಬಿಟ್ಟು ನಿಮ್ಮ ಜವಾಬ್ದಾರಿ ಅರಿತು ಕೊಳ್ಳಿ," ಎಂದಳು.  

ಮಕ್ಕಳು ಇಲ್ಲದ ಚಿಂತೆ ಮರೆಯಲು ಇಬ್ಬರೂ ಹೀಗೆ ಹಾಸ್ಯದ ಮಾತನಾಡುವದು, ಮಕ್ಕಳಂತೆ ಕುಣಿದಾಡಿ  ಅದನ್ನು ಮರೆಯುವರು.

"ಮಧು  ನಿಮ್ಮ ಈ ಹಾಳು ಚಲನ ಚಿತ್ರದ ಹಾಡುಗಳು ಹಾಗೂ ಪ್ರೀತಿಯ ಮಾತುಗಳನ್ನು ನಮ್ಮ ಮದುವೆ ಆದಮೇಲೆ ಇಲ್ಲಿಯವರೆಗೆ ಕೇಳುತ್ತಾ ಬಂದಿದ್ದೇನೆ. ನೀವು ಮಾಡಿದ ಘನಂದಾರಿ ಕೆಲಸ ಯಾವುದು ಮೊದಲು ಹೇಳಿ?"

"ಶಕು ಸ್ವಲ್ಪ ತಾಳ್ಮೆ ಇರಲಿ. ತಾಂತ್ರಿಕ ಸಮಸ್ಯೆ ನಿನಗೇನು ಅರ್ಥ ವಾಗುವದು? ಅದಕ್ಕಾಗಿ ನಾನು ಹೇಳುವದನ್ನು ಸುಮ್ಮನೆ ಕೇಳು. ನಡು ನಡುವೆ ಪ್ರಶ್ನೆ ಮಾಡಬೇಡ. ನಾನು ಕೆಲಸ ಮಾಡಿದ  ಹ್ಯಾರಿಸ್ ಅಂಡ್ ಸನ್ಸ ಮಷಿನ್ ಟೂಲ್ಸ ಕಂಪನಿಯವರು ನಿವೃತ್ತ ಮೆಕ್ಯಾನಿಕಲ್ ಇಂಜನಿಯರ್ ಆದ ನನಗೆ ಯಾಂತ್ರಿಕ ದೋಷ ಸರಿಪಡಿಸಲು ಒಂದು ದಿವಸ ಅರ್ಜೆಂಟ್ ಬರಲು ಕರೆ ಮಾಡಿದರು. ಒಂದು ಗಂಟೆ ಅವಧಿಯಲ್ಲಿ ಎಲ್ಲವೂ ಸರಿಮಾಡಿದೆ. ಕಂಪನಿ ಮ್ಯಾನೇಜರ್ ಪುರುಷೋತ್ತಮ ನನ್ನ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ಹೀಗೆ ಹೇಳಿದರು. 

 “ನೀನು ತುಂಬಾ ಜಾಣ ಕಣೋ. ಇದೋ ನಿನಗಾಗಿ ರೂಪಾಯಿ 20 ಸಾವಿರ ಸ್ಯಾಂಕ್ಶನ್ ಮಾಡಿದೆ. ನಿನ್ನ ಮನೆ ಅಡ್ರೆಸ್ ಗೆ ಚೆಕ್ ಬರುವದು ಎಂದು ನನ್ನ ಹೆಗಲಮೇಲೆ ಕೈ ಇಟ್ಟು ನಗುತ್ತ ಹೇಳಿದರು. ಅದೇ ಈಗ ಬಂದಿರುವ 20 ಸಾವಿರ ರೂಪಾಯಿಯ ಚೆಕ್."

"ನಿಜಕ್ಕೂ ಕಂಪನಿಯವರು ನಿಮ್ಮ ಕೆಲಸಕ್ಕೆ ಇಷ್ಟು ಸಂಭಾವನೆ ಏಕೆ  ಕೊಟ್ಟಿರುವರು ಎಂದು ನಂಬಲು ಅಸಾಧ್ಯ. ಒಂದು ಮಾತು ಸತ್ಯ. ನೀವು ಬಡಾಯಿ ಕೊಚ್ಚಿ ಕೊಳ್ಳುವದರಲ್ಲಿ ತುಂಬಾ ನಿಸ್ಸೀಮರು. ಆದರೆ  ನಾನು ಮಾಡಿದ ಕೆಲಸದ ಮುಂದೆ ನಿಮ್ಮದು ಏನೂ ಅಲ್ಲ."

"ಶಕು, ನಿನ್ನ ಮಾತಿನ ಹಾಸ್ಯಧ ಧಾಟಿ ಮಿತಿಮೀರಿ ಆಯಿತು. ಲಕ್ಷ್ಮಣ್ ರೇಖೆ ಮೀರಿ ಹೋಗುತ್ತ ಇದ್ದಿ. ಹಾಸ್ಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ನಿನ್ನಲ್ಲಿ ಇರುವ  ಅಹಂ ಅದು ಒಳ್ಳೆಯದು ಅಲ್ಲ.  ನೀನು ಮಾಡಿದ ಘನಂದಾರಿ ಕೆಲಸ ವಾದಾದರೂ ಏನು? ಬೇಗ ಹೇಳು."

"ಸ್ವಲ್ಪ ತಡೆಯಿರಿ ಪತಿ ಮಹಾಶಯರೇ. ನಾನು ಐದು ವರ್ಷ ಗಳ ಹಿಂದೆ ರಾಘವಪೂರ ಕಲಾ ಮತ್ತು ವಿಜ್ಞಾನ ಕಾಲೇಜ್ ನಲ್ಲಿ ಸೀನಿಯರ್  ಲೈಬ್ರೇರಿಯನ್ ಎಂದು ಕೆಲಸ ಮಾಡುವಾಗ  ಸುಮಾರು ಐದು ಲಕ್ಷಕ್ಕೂ ಮೇಲ್ಪಟ್ಟ ಪುಸ್ತಕಗಳು (ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಸೇರಿ) ಇರುವ ದೊಡ್ಡ ವಾಚನಾಲಯ. ಕಾಲೇಜಿನ  ಬೋಧಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ ಗಳು ಕಪಾಟಿನಲ್ಲಿ ಇರುವ ಪುಸ್ತಕ ತೆಗೆದುಕೊಂಡು ಓದಿದ ಮೇಲೆ ಟೇಬಲ್ ಮೇಲೆ ಇಡುವರು. ಕೆಲವರಂತೂ ನೆಲದಮೇಲೆ ಇಡುವರು. ಇನ್ನೂ ಕೆಲವರು ವಾಚನಾಲಯದ ಹೊರಗೆ ದೊಡ್ಡ ಮರದ ಕೆಳಗೆ ಇರುವ ಕಟ್ಟೆ ಮೇಲೆ ಕುಳಿತು ಅಲ್ಲಿಯೇ ಪುಸ್ತಕ ಬಿಟ್ಟು ಹೋಗುವರು.  ಸಾಯಂಕಾಲ ಮನೆಗೆ ಬರುವ ಅವಸರ ಇದ್ದರೂ ಎಲ್ಲ ಪುಸ್ತಕಗಳನ್ನು ಹುಡುಕಿ ತಂದು  ಸಂಭಂಧ ಪಟ್ಟ ಕಪಾಟುಗಳಲ್ಲಿ  ಇಡುವದಕ್ಕೆ ಹೆಚ್ಚಿನ ಸಮಯ ಕೆಲಸ ಮಾಡುವ ಅನಿವಾರ್ಯತೆ ಇದ್ದಿತು. ತಡವಾದರೆ ಕಾಲೇಜಿನ ವಾಚ್ ಮ್ಯಾನ್  ಬಂದು ಅವಸರ ಮಾಡುವನು. ಆದಕ್ಕೆ ಎಷ್ಟು ಸಂಯಮ ಬೇಕು? ಇಡೀ ವರ್ಷ ಒಂದೂ ಕಂಪ್ಲೇಂಟ್ ಬರದೇ ಇರುವಂತೆ ವಾಚನಾಲಯದ ಕೆಲಸಗಳು ಸುಗಮವಾಗಿ ನಡೆಯಿತು. ಮೊದಲು ಇದ್ದ ಲೈಬ್ರೇರಿಯನ್ ಮುನಿರಾಜಪ್ಪನ ಮೇಲೆ ಬಹಳ ಕಂಪ್ಲೇಂಟ್ ಬಂದಿರುವ ದರಿಂದ ಅವನನ್ನು ಎತ್ತಂಗಡಿ ಮಾಡಿ ದೂರದ ಊರಿಗೆ ಕಳಿಸಿದರು. ನನ್ನ ಅಚ್ಚುಕಟ್ಟಾದ ಕೆಲಸ ಕಾಲೇಜಿನ ಆಡಳಿತ ವರ್ಗಕ್ಕೆ ಮೆಚ್ಚುಗೆ ಆಯಿತು. ಇದೇ ವರ್ಷ ನನಗೆ ನಿವೃತ್ತಿ ಆಗುವದರಿಂದ 'ಬೆಸ್ಟ್ ಲೈಬ್ರರಿಯನ್ ಆಫ ದಿ ಕಾಲೇಜ್ 2020 ಎನ್ನುವ ಪ್ರಶಸ್ತಿ ಪತ್ರ, ರೂಪಾಯಿ ಇಪ್ಪತ್ತೈದು ಸಾವಿರ ನಗದು, ಶಾಲು ಹಾಗೂ ಹಾರ ತುರಾಯಿಯಿಂದ ಸನ್ಮಾನ ಮಾಡಿದರು."

"ಶಕು ನೀನು ಒಳ್ಳೆಯ ಕೆಲಸ ಮಾಡಿರುವದು ನಿಜ ವಾಗಿಯೂ ಹೆಮ್ಮೆಯ ಕೆಲಸ. ಪುಸ್ತಕ ಜೋಡಿಸುವ ಕೆಲಸಕ್ಕೆ ಜಾಣತನದ ಅವಶ್ಯಕತೆ ಇರುವುದಿಲ್ಲ. ಯಾರು ಬೇಕಾದರೂ ಮಾಡಬಹುದು. ಆದರೆ ನಮ್ಮ ತಾಂತ್ರಿಕ ಕೆಲಸ ಹಾಗಿಲ್ಲ. ಇದಕ್ಕೆ ಅನುಭವ ಹಾಗೂ ತಾಂತ್ರಿಕ ಜ್ಞಾನ ಅವಶ್ಯ."

"ಮಧು ನಾನು ಮಾಡಿದ ಕೆಲಸ ಬರಿ ಪುಸ್ತಕ ಜೋಡಿಸು ವುದು ಅಲ್ಲ. ಈ ಕೆಲಸ ಯಾರು ಬೇಕು ಅವರು ಮಾಡಲು ಬರುವದಿಲ್ಲ. ಆ ಪುಸ್ತಕಗಳನ್ನು ವಿಷಯಾಧಾರಿತ ಕಪಾಟುಗಳಲ್ಲಿ ಸಂಖ್ಯ ಕ್ರಮಾಂಕದ ಪ್ರಕಾರ ಇಡಬೇಕು. ಇಂತಹ ಚರ್ಚೆ ಮಾಡಿ ಸಮಯದ ದುರೂಪಯೋಗ ಮಾಡುವದು ಬೇಡ."

ಅಂದನಿಂದ ಅವರು ಇಂತಹ ಅನಾವಶ್ಯಕ ಚರ್ಚೆ ನಿಲ್ಲಿಸಿದರು. ಪ್ರತಿ ದಿವಸ ಸಾಯಂಕಾಲ ಶಕುಂತಲ ಸಮೀಪದಲ್ಲೇ ಇರುವ ಕೋದಂಡರಾಮ ದೇವಸ್ಥಾನದಲ್ಲಿ ನಡೆಯುವ ಭಜನೆ ಹಾಗೂ ಪ್ರವಚನ ಕೇಳಲು ಅಲ್ಲಿಗೆ ಹೋಗುವಳು. ಮುಂದೆ ಮೊಬೈಲ್ ಲಿಂಕ್ ನಿಂದ ಮನೆಯಲ್ಲಿ ಪ್ರವಚನ ಕೇಳುವಳು. ಒಂದು ಸಲದ ಪ್ರವಚನ ಆಕೆಗೆ ತುಂಬಾ ಪ್ರಭಾವ ಬೀರಿತು. ಅಂದು ರಾತ್ರಿ ಪತಿ ಹತ್ತು ಗಂಟೆಗೆ ಮನೆಗೆ ಬಂದರು. ಪತ್ನಿಗೆ ಪತಿ ಮಹಾಶಯ ಎಲ್ಲಿ ಕಾಲಹರಣ ಮಾಡುವರು ಎನ್ನುವುದು ಗೊತ್ತಾಯಿತು.

ಆಗ ಶಕುಂತಲ ಸಿಟ್ಟಿನಿಂದ," ಮಧು  ಅವರೇ, ಈಗ ಸಮಯ ಎಷ್ಟು? ಇದು ಮನೆಗೆ ಬರುವ  ಸಮಯವೇ? ನೀವು ಎಲ್ಲಿಗೆ ಹೋಗುವಿರಿ? ಏನೇನು ಮಾಡುವಿರಿ? ಎಲ್ಲವೂ ಗೊತ್ತು."

ಮಧುಸೂದನ ಅವರಿಗೂ ಸಿಟ್ಟು ಬಂದು, "ನಾನು ಗೆಳೆಯರ ಜೊತೆಗೆ ಹರಟೆ,  ಇಸ್ಪೀಟ್, ಮೋಜು ಮಸ್ತೀ ಮಾಡುತ್ತೇನೆ. ಅಲ್ಲದೇ ಆಗಾಗ ಡ್ರಿಂಕ್ಸ್ ಕೂಡಾ ಆಗುವುದು. ಇದು ಬಿಟ್ಟು ಬೇರೇನೂ ಇಲ್ಲ."

"ನೋಡಿ ಇವೆಲ್ಲವೂ ಇಂದೆ ಕೊನೆ. ನಿಮ್ಮ ಸ್ನೇಹಿತರಾದ ಅಮರ್ ನಾಥ, ಮಹೇಂದ್ರ ಹಾಗೂ ಧನಂಜಯ ಅವರೆಲ್ಲರೂ ಒಳ್ಳೇಯವರು ಅಲ್ಲ. ಅವರ ಸ್ನೇಹ ಮಾಡಿ ನೀವು ಕೆಡಬೇಡಿ. ನಾಳೆಯಿಂದ ಬೆಳಗ್ಗೆ ಆರು ಗಂಟೆಗೆ  ಎದ್ದು ಸ್ನಾನ ಮಾಡಿ ದೇವರ ಪೂಜೆ ಮಾಡಿ ಆಧ್ಯಾತ್ಮಿಕ ಚಿಂತನೆಯಲ್ಲಿ ಸತ್ಕಾಲಕ್ಷೇಪ ಮಾಡಿ. ಇದಲ್ಲದೇ ಬಡಬಗ್ಗರಿಗೆ ದಾನ ಧರ್ಮ ಮಾಡಿದರೆ  ನಮಗೆ ಮಕ್ಕಳು ಇಲ್ಲದ ಚಿಂತೆಯಿಂದ ಹೊರಬರ ಬಹುದು." 

"ಶಕು ನಿನಗೆ ಗೊತ್ತಿರುವಂತೆ  ಆಧ್ಯಾತ್ಮಿಕ ನನ್ನ ಸ್ವಭಾವಕ್ಕೆ ಹೊಂದುವದಿಲ್ಲ. ಇನ್ನು ದಾನ ಧರ್ಮ ಓಕೆ."

" ಚಿಂತೆ ಮಾಡಬೇಡಿ. ಆಧ್ಯಾತ್ಮಕ್ಕೆ ಬೇಕಾಗುವ ಪುಸ್ತಕಗಳು, ಮನೆಯಲ್ಲಿ ಪ್ರವಚನ ಕೇಳಲು ಮೊಬೈಲ್ ನಲ್ಲಿ ಲಿಂಕ್ ಎಲ್ಲವನ್ನೂ ಕೊಡುವೆ."

ಮಧುಸೂದನನಿಗೆ ಇದೆಲ್ಲವನ್ನೂ ಮಾಡಲು ಮನಸ್ಸು ಆಗಲಿಲ್ಲ. ಪತಿ ಪತ್ನಿ ಯರಲ್ಲಿ ಮನಸ್ತಾಪ ಆಗಿ ಪರಸ್ಪರ ಮಾತನಾಡುವದನ್ನು ಬಿಟ್ಟರು. ಈ ಅವಧಿಯಲ್ಲಿ ಗೆಳೆಯರ ಭೇಟಿ ಬಹಳವಾಯಿತು. ಇದರಿಂದ ಅವರ ಆರೋಗ್ಯದಮೇಲೆ ದುಷ್ಪರಿಣಾಮ ಆಯಿತು. ಆಗ ಮಧುಸೂನನಿಗೆ ದೇವರ ಮೇಲೆ ನಂಬಿಕೆ ಬಂದಿತು. ಮಧುಸೂದನ ಜ್ಞಾನೋದಯ ವಾಗಿ ಪತ್ನಿ ಹೇಳಿದ್ದು ಒಪ್ಪಿದ. ಸ್ನೇಹಿತರ ಜೊತೆಗೆ ಕಾಲಹರಣ ಮಾಡುವದು ನಿಂತು ಹೋಯಿತು. 

ಮುಂದೆ ಅವರಿಬ್ಬರೂ ಸತ್ಕಾಲಕ್ಷೇಪದಲ್ಲಿ ನಿರತ ರಾಗುವದಲ್ಲದೇ ಅನೇಕ ಸಾಮಾಜಿಕ ಕಾರ್ಯದಲ್ಲಿ ತೊಡಗಿದರು. ಮನೆಯಲ್ಲಿ ಸತ್ಕಾಲಕ್ಷೇಪ ಹೊರಗೆ ಸಮಾಜ  ಕಲ್ಯಾಣ ಕಾರ್ಯಕ್ರಮಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರರಾದರು. ಒಂದು ವರ್ಷದ ನಂತರ ಇವರ ನಿಸ್ವಾರ್ಥ ಸಮಾಜ ಸೇವೆ ಕೆಲಸ ಎಲ್ಲರಿಗೂ ಮೆಚ್ಚುಗೆ ಆಯಿತು.

ರಾಘವಪುರದ ಜನರು ಅವರಿಗೆ 'ದಂಪತಿ ಅಂದರೆ ಹೀಗಿರಬೇಕು' ಎಂದು ಪ್ರಶಂಸೆ ಮಾಡಿದರು. 


Rate this content
Log in

Similar kannada story from Comedy