ಕೃಷ್ಣ
ಕೃಷ್ಣ
ಎಷ್ಟು ಬರೆದರೇನು ಎದೆಯ ನೋವು ಕರಗದು
ಎಷ್ಟು ಕೂಗಿ ಕರೆದರೇನು ಮನದ ದಾಹ ನೀಗದು
ಕಣ್ಣಲೆಗಳು ತುಂಬಿ ನಿನ್ನ ಮೊಗವು ಮಂಜಾಯಿತು
ಅಧರಗಳು ಅದುರಿ ಪದಗಳು ನುಡಿಯದಾಯಿತು
ಒಲುಮೆಯ ಭಾವದಲಿ ತನುವು ಮುಳುಗಿತು
ಹರಿ ಮುಕುಂದ ಮಾಧವ ನೆನ್ನಲು ಮನಸ್ಸು ಹಗುರವಾಯಿತು
ಕಯ್ಯ ಚಾಚಿ ನಿನ್ನ ಬೇಡಲು ಎದೆಯ ಭಾರ ಇಳಿಯತು
ಪಾದಗಳು ತಾಳ ಹಾಕಿ ಕುಣಿಯೇ ಜಗವು
ಸುಂದರವಾಯಿತು
ಕಷ್ಟಗಳು ಕಮಲದಂತೆ ಮೃದುವಾಯಿತು
ಕಂದನಂತೆ ನಿನ್ನ ಮಡಿಲು ನನ್ನ ತಬ್ಬಿಯಾಯಿತು
ಕಲ್ಮಶ ವಿರದ ಬೇಡಿಕೆಯಲ್ಲಿ ನೆಮ್ಮದಿ ಕಂಡಾಯಿತು
ಮುದ್ದು ಕೃಷ್ಣ ನನ್ನ ಬಿಡೆನೆಂಬ ನಂಬಿಕೆ ಬಲವಾಯಿತು