ಮನಸು
ಮನಸು
ದುಃಖ ತಪ್ತದಲ್ಲಿ ಏನೆಂದು ಬರೆಯಲಿ
ಕೋಪದ ಕಿಡಿಯು ಹೇಗೆಂದು ಹೇಳಲಿ
ದಿನವೊಮ್ಮೆಯಂತೆ ಎಂದೂ ನೆನೆಯಲಿಲ್ಲ
ಮಾರಣ ಹೋಮ ನಡೆದಾಗ ನೊಂದೆವಲ್ಲ
ಮೋಜು ಮಸ್ತಿಯಲಿ ಕುಣಿದವು ನವ ಪೀಳಿಗೆ
ನಾನು ನೀನು ಎಂದು ಕಚ್ಚಾಡಿದವು ಕೊನೆಗೆ
ದೇಶ ಯೋದರ ಬಗ್ಗೆ ಇಲ್ಲ ತಿಳುವಳಿಕೆ
ಪ್ರೀತಿ ಮೋಹ ಎಂಬುದೇ ಕನವರಿಕೆ
ಚಳಿ ಗಾಳಿಯಲ್ಲೂ ನಗುತ ನಿಂತ ಮನ
ಇಂದು ಗುರುತೇ ಸಿಗದೆ ತುಂಬಿದೆ ಸ್ಮಶಾನ
ಓದದೇ ಬರೆಯದೇ ಕಾಲಾಹರಣ ಮಾಡಿ
ಕುಣಿತ ಕುಡಿತದಲಿ ಹೆಣ್ಣು ಗಂಡು ಕೂಡಿ
ಅದು ಆಗಬೇಕು ಇದು ಆಗಬೇಕು ಎನ್ನುವವರೇ
ಯೋದನಾಗಬೇಕೆಂದು ಎಂದು ಹೇಳುವರೆ?
ನಿರುದ್ಯೋಗ ದಲಿ ಕಳ್ಳರಾಗುವ ಬದಲು
ಮನಷ್ಯತ್ವದಿಂದ ಚಿಂತಿಸಿ ಮೊದಲು
ಹೊರಡಿ ಗಡಿಯ ನಾಡಿನ ಕಡೆಗೆ
ಕೈ ಗೂಡಿಸಿ ನಮಿಸಿರಿ ಯೋದನ ನಡಿಗೆ
ನಿಲ್ಲಲಿ ದುಂದು ವೆಚ್ಚವನು ಇಂದಾದರೂ
ಕೂಡಿಟ್ಟ ಕಾಸು ಉಪಯೋಗ ಬರಲಿ
ಯೋದರ ಒಳಿತಿಗೆಂದು
ಅಶಾಂತಿಯ ನೆಲೆಯಾಗಿದೆ ಮನವಿಂದು
ಜೈ ಭಾರತ ಮಾತೆಯ ಕುಡಿಗಳೇ
ಶಾಂತಿ ಸಿಗಲಿ ನಿಮಗೆಂದು ಕೋರುವೆ ಕೊನೆಗೆ
ಕಣ್ಣೀರ ತರ್ಪಣ ನಿಮಗಿಂದು
ಮೌನದಿ ಮಿಡಿದಿದೆ ಒಡಲಿಂದು