STORYMIRROR

Thrineshwara Mysore

Tragedy Inspirational

2  

Thrineshwara Mysore

Tragedy Inspirational

ಪ್ರಕೃತಿ ಸಹಜತೆಯಲ್ಲಿ ಭೇದಗಳಿಲ್ಲ

ಪ್ರಕೃತಿ ಸಹಜತೆಯಲ್ಲಿ ಭೇದಗಳಿಲ್ಲ

1 min
3.0K


ಹೊಟ್ಟೆಯೊಳಗೆ ಇನ್ನೂ ಜನಿಸದ ಕಂದಮ್ಮನ  

ಹೊತ್ತು ನಡೆಯುತ್ತಿದ್ದ ಮಂಗವೊಂದನ್ನ ಕಂಡ ಚಿರತೆ 

ಮಂಗನ ಮೇಲೆ ರಭಸದಲ್ಲಿ ಎರಗಿ ಹಿಡಿಯಲು, 

ಬೆದರಿದ ಮಂಗ ತಾನು ಸಾಯುವ ಮುನ್ನ 

ತನ್ನ ಕಂದಮ್ಮಗೆ ಜನ್ಮ ನೀಡಿತ್ತು;


ಅರಚಾಡುತ್ತಿದ್ದ ಮರಿ ಮಂಗವ ಕಂಡ ಚಿರತೆ 

ತಾಯಿ ಮಂಗವನ್ನೂ ತಿನ್ನದೆ, ಮರಿಯನ್ನೂ ತಿನ್ನದೆ, 

ಸತ್ತುಹೋದ ತಾಯಿ ಮಂಗವ ನೋಡಿ ಮರುಗಿ, 

ಮರಿಯನ್ನ ಎತ್ತಿಕೊಂಡು ಮರದ ಮೇಲೆ ಕುಳಿತು 

ಅದಕ್ಕೆ ರಕ್ಷಣೆ ನೀಡುವ ಚಿಂತೆಯಲಿ ಮುಳುಗಿತ್ತು;


ಮಂಗವನ್ನ ಹಿಡಿಯುವ ಮುನ್ನ ಅದು ಗರ್ಭಿಣಿಯೆಂದು 

ತಿಳಿಯದ ಚಿರತೆಗೆ ಮರಿ ಮಂಗವನ್ನ ಹೇಗೆ ಸಾಕುವುದು 

ಎಂಬ ತಿಳುವಳಿಕೆ ಇಲ್ಲದೆ, ಅದರ ರಕ್ಷಣೆಯ ಕಾಳಜಿ ಹೊತ್ತು 

ಸದಾ ಅದರ ಬಳಿಯೇ ಕುಳಿತಿರುವ ಜೊತೆಗೆ 

ಎತ್ತ ಹೋದರಲ್ಲಿಗೆ ಅದನ್ನೂ ಎತ್ತಿಕೊಂಡು ಸಾಗುತ್ತಿತ್ತು;


ಪ್ರಕೃತಿದತ್ತ ಮಿತ ತಿಳುವಳಿಕೆಯಲ್ಲೇ ಅಡಗಿದ್ದ ವಾತ್ಸಲ್ಯ 

ಮರಿ ಮಂಗವ ರಕ್ಷಿಸುವಲ್ಲಿ ಚಿರತೆಯನ್ನ ಪ್ರೇರೇಪಿಸಿತ್ತು,

ಪ್ರಕೃತಿ ಸಹಜವಾದ ತನ್ನ ಇರುವಿಕೆಯಲ್ಲಿ 

ಇತರ ಪ್ರಾಣಿಗಳನ್ನ ಕೊಂದು ತಿನ್ನುವ ಕ್ರೂರತ್ವವಿದ್ದರೂ 

ಚಿರತೆ ಒಂದು ಕ್ರೂರ ಪ್ರಾಣಿಯೆಂದು ಕರೆಯಲಾದೀತೇ?;


ಕ್ರೂರತೆಯಾಗಲೀ, ಮೃದುತ್ವವಾಗಲೀ ನಮ್ಮ ಕಲ್ಪನೆಯಷ್ಟೇ,

ಪ್ರಕೃತಿದತ್ತ ಸ್ವಭಾವವು ತಮ್ಮ ಇರುವಿಕೆಗೆ ಅಗತ್ಯವೆನಿಸಿರಲು 

ಪ್ರತಿಯೊಬ್ಬರ ಸಹಜತೆಯ ಪ್ರಕ್ರಿಯೆಗಳನ್ನ ಒಪ್ಪಿಕೊಳ್ಳಬೇಕು,

ಮನದ ಮುಂದಣ ಅಸೆ, ಭಯಗಳು ಹುಟ್ಟುಹಾಕಿದ 

ಯಾವುದೇ ಅಸಹಜತೆಯನ್ನ ನಾವು ಧಿಕ್ಕರಿಸಲೇಬೇಕು.



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy