STORYMIRROR

Thrineshwara Mysore

Tragedy Inspirational

2  

Thrineshwara Mysore

Tragedy Inspirational

ಪ್ರಕೃತಿ ಸಹಜತೆಯಲ್ಲಿ ಭೇದಗಳಿಲ್ಲ

ಪ್ರಕೃತಿ ಸಹಜತೆಯಲ್ಲಿ ಭೇದಗಳಿಲ್ಲ

1 min
3.0K


ಹೊಟ್ಟೆಯೊಳಗೆ ಇನ್ನೂ ಜನಿಸದ ಕಂದಮ್ಮನ  

ಹೊತ್ತು ನಡೆಯುತ್ತಿದ್ದ ಮಂಗವೊಂದನ್ನ ಕಂಡ ಚಿರತೆ 

ಮಂಗನ ಮೇಲೆ ರಭಸದಲ್ಲಿ ಎರಗಿ ಹಿಡಿಯಲು, 

ಬೆದರಿದ ಮಂಗ ತಾನು ಸಾಯುವ ಮುನ್ನ 

ತನ್ನ ಕಂದಮ್ಮಗೆ ಜನ್ಮ ನೀಡಿತ್ತು;


ಅರಚಾಡುತ್ತಿದ್ದ ಮರಿ ಮಂಗವ ಕಂಡ ಚಿರತೆ 

ತಾಯಿ ಮಂಗವನ್ನೂ ತಿನ್ನದೆ, ಮರಿಯನ್ನೂ ತಿನ್ನದೆ, 

ಸತ್ತುಹೋದ ತಾಯಿ ಮಂಗವ ನೋಡಿ ಮರುಗಿ, 

ಮರಿಯನ್ನ ಎತ್ತಿಕೊಂಡು ಮರದ ಮೇಲೆ ಕುಳಿತು 

ಅದಕ್ಕೆ ರಕ್ಷಣೆ ನೀಡುವ ಚಿಂತೆಯಲಿ ಮುಳುಗಿತ್ತು;


ಮಂಗವನ್ನ ಹಿಡಿಯುವ ಮುನ್ನ ಅದು ಗರ್ಭಿಣಿಯೆಂದು 

ತಿಳಿಯದ ಚಿರತೆಗೆ ಮರಿ ಮಂಗವನ್ನ ಹೇಗೆ ಸಾಕುವುದು 

ಎಂಬ ತಿಳುವಳಿಕೆ ಇಲ್ಲದೆ, ಅದರ ರಕ್ಷಣೆಯ ಕಾಳಜಿ ಹೊತ್ತು 

ಸದಾ ಅದರ ಬಳಿಯೇ ಕುಳಿತಿರುವ ಜೊತೆಗೆ 

ಎತ್ತ ಹೋದರಲ್ಲಿಗೆ ಅದನ್ನೂ ಎತ್ತಿಕೊಂಡು ಸಾಗುತ್ತಿತ್ತು;


ಪ್ರಕೃತಿದತ್ತ ಮಿತ ತಿಳುವಳಿಕೆಯಲ್ಲೇ ಅಡಗಿದ್ದ ವಾತ್ಸಲ್ಯ 

ಮರಿ ಮಂಗವ ರಕ್ಷಿಸುವಲ್ಲಿ ಚಿರತೆಯನ್ನ ಪ್ರೇರೇಪಿಸಿತ್ತು,

ಪ್ರಕೃತಿ ಸಹಜವಾದ ತನ್ನ ಇರುವಿಕೆಯಲ್ಲಿ 

ಇತರ ಪ್ರಾಣಿಗಳನ್ನ ಕೊಂದು ತಿನ್ನುವ ಕ್ರೂರತ್ವವಿದ್ದರೂ 

ಚಿರತೆ ಒಂದು ಕ್ರೂರ ಪ್ರಾಣಿಯೆಂದು ಕರೆಯಲಾದೀತೇ?;


ಕ್ರೂರತೆಯಾಗಲೀ, ಮೃದುತ್ವವಾಗಲೀ ನಮ್ಮ ಕಲ್ಪನೆಯಷ್ಟೇ,

ಪ್ರಕೃತಿದತ್ತ ಸ್ವಭಾವವು ತಮ್ಮ ಇರುವಿಕೆಗೆ ಅಗತ್ಯವೆನಿಸಿರಲು 

ಪ್ರತಿಯೊಬ್ಬರ ಸಹಜತೆಯ ಪ್ರಕ್ರಿಯೆಗಳನ್ನ ಒಪ್ಪಿಕೊಳ್ಳಬೇಕು,

ಮನದ ಮುಂದಣ ಅಸೆ, ಭಯಗಳು ಹುಟ್ಟುಹಾಕಿದ 

ಯಾವುದೇ ಅಸಹಜತೆಯನ್ನ ನಾವು ಧಿಕ್ಕರಿಸಲೇಬೇಕು.



Rate this content
Log in

Similar kannada poem from Tragedy