STORYMIRROR

Vinaya Gowri

Tragedy Inspirational

5  

Vinaya Gowri

Tragedy Inspirational

ದಾರಿ ತಪ್ಪಬೇಡ ಮಗಳೇ

ದಾರಿ ತಪ್ಪಬೇಡ ಮಗಳೇ

1 min
104

ಭರತನಾರಿ ಎಂದರೆ ಹೆಮ್ಮೆ

ವಿಶ್ವವೇ ಕೈಮುಗಿದು ನಿಂತಾಗ

ಅವಳು ಪರಮಪಾವನಳು ಎಂದೆಂದಿಗೂ


ಆದರಿಂದು ಮತ್ತಿನ ಗುಂಗಿನಲ್ಲಿ

ಆಪತ್ತಿನ ಸರಮಾಲೆಯೆದುರು

ತುತ್ತು ಮತ್ತಿಗಾಗಿ ಕಾದು ಕುಳಿತೆಯಲ್ಲ


ಚಟವೆಂಬ ಗಂಟನು ಹಿಡಿದು

ಸೋಮರಸದ ದಾಸನಾಗಿ

ಅಮಲಿನ ಲೋಕಕ್ಕೆ ಅಧಿಪತಿಯಾಗಿಹೆಯ.....


ದೇಶವೇ ಪರಿತಪಿಸುತಿದೆ

ಸೋಲಿನ ಕುಣಿಕೆಯೆದುರು

ಕತ್ತು ಬಗ್ಗಿಸಿದೆ ಮಹಾಮಾರಿಯೆದುರು........


ಜೀವನದ ಸ್ವಚ್ಚಂದ ಓಟದಲ್ಲಿ

ತಂತ್ರಜ್ಞಾನದ ಮಿತಿಮೀರಿದ ಆಟದಲಿ

ಆಸೆಯ ವ್ಯೂಹದೊಳಗೆ ಬಂಧಿಯಾದೆಯ.....


ಹೆಣ್ಣೆಂಬ ಮುಗ್ದ ಮನಸ್ಸು 

ಬೆಣ್ಣೆಯಂತಹ ಪರಿಶುದ್ಧ ಮನಸು

ಕ್ಷಣಿಕ ಅಮಲಿಗಾಗಿ ಇಂದು ಹಪಹಪಿಸಿದೆಯೇ......


ಭರತಮಾತೆ ಕರೆಯುತಿಹಳು

ಕೇಳಿಲ್ಲಿ ಹೆತ್ತ ತಾಯಿಯಂತೆ

ತನ್ನ ಹೆಣ್ಣುಮಕ್ಕಳ ನೋಡಿ ಕಣ್ಣೀರಿಡುತಿರೇ........


ದಾರಿತಪ್ಪಬೇಡ ಮಗಳೇ

ಕೈಗೆ ಸಿಗದು ಕಾಮನಬಿಲ್ಲು

ನನ್ನ ಕಂದ ಕಣ್ಮಣಿ ನೀ ಹಠವ ಮಾಡದೆ.......



Rate this content
Log in

Similar kannada poem from Tragedy