ಜೀವನ
ಜೀವನ
ಆತ್ಮೀಯತೆಯ ವೇಷತೊಟ್ಟು
ಅಭಿವೃದ್ಧಿಯ ಮಾತು ಕೊಟ್ಟು
ಕೊಟ್ಟ ವೋಟ್ ಮರೆತು ಬಿಟ್ಟು
ಗೋಸುಂಬೆಯಾಗಿ ಬಿಟ್ರು
ರಾಜಕೀಯ ಲಾಭಕ್ಕಾಗಿ
ರಾಜ, ಟಿಪ್ಪು ಶಿವಾಜಿಯ
ಮಾತೆಲೆದು
ಇಲ್ಲ ಸಲ್ಲದ ಸುಳ್ಳೇಲಿ
ದ್ರೋಹವೆಸೆದವರು ನೀವು
ಮನೆಯೆದುರು ಬಂದು
ತುತ್ತು ಚೀಲಕ್ಕೆ
ಯಾಚಿಸಿದೋನ ದೂಕಿ
ನೀಚನೆಂದೇಳಿ,
ಮನೆ ಮನೆಗೂ ನುಗ್ಗಿ
ದೇಶ ನಾಶಕ್ಕೆ
ಮತ ಯಾಚಿಸಿದ ನೀನು
ಎಷ್ಟೊಂದು ದುಷ್ಟ…!