ಬದುಕು
ಬದುಕು
ವರ್ಣಿಸಲು ಬಾರದಂತೆ
ನೂರಾರು ತಿರುವುಗಳು
ಬಾಳಬಂಡಿಯೇ ಒಂದು ಕಥೆ
ಜೊತೆಗೆ ಕ್ಷಣ ಕ್ಷಣಕ್ಕೂ ಕಾಡುವ ನೋವುಗಳು..//
ಯಾರದೋ ಆಗಮನ ಅನಿಶ್ಚಿತವಾಗಿ
ಖಿನ್ನತೆಯ ಬದುಕ ಶಮನವಾಗಿಸಲು
ನೀತಿಯ ತೊರೆದು ಸಾಲು ಸಾಲಾಗಿ
ಮನ ಕೆಡಿಸಿ ಬರವಸೆಯ ಮೂಡಿಸಿ ನೋವ ಶಾಶ್ವತವಾಗಿಸಲು..//
ಮನದ ನಿಲ್ದಾಣದಲ್ಲಿ ಬಂದಿಳಿದರು ಹಲವರು
ಜೊತೆಗಿದ್ದು ಹೆಜ್ಜೆ ಹಾಕಿದ್ದು ಮಾತ್ರ ಕೆಲವರು
ಕೆಲವರನ್ನು ಹಲವರೆಂದು ಭಾವಿಸಿ ಬದುಕಬೇಕು
ಬಿಟ್ಟುಹೋದವರು ನಮ್ಮವರಲ್ಲ ಎಂಬುದ ಮೊದಲು ಅರಿಯಬೇಕು..//