STORYMIRROR

Harish T H

Abstract Others

4  

Harish T H

Abstract Others

ಸೌರ ಗ್ರಹಣ

ಸೌರ ಗ್ರಹಣ

1 min
79

ಆದಿತ್ಯ-ಧರಿತ್ರಿಯರ ನಡುವೆ ಶಶಧರನು

ಬಂದು ಅರ್ಧ ಬೆಳಕನ್ನು ತಡೆಹಿಡಿದನು.

ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ 

ಸೌರ ಗ್ರಹಣವನ್ನು ಉಂಟಾಗಿಸಿದನು.


ಧರೆಗೆಂದಲೇ ಭಾಸ್ಕರ ಬೆಳಕನ್ನು ನೀಡಲು

ಸೋಮನು ಅಡ್ಡಿಯಾಗಿ ಕಸಿದನು ಬೆಳಕನ್ನು.

ಪೃಥ್ವಿಗೆ ಹಿಮಾಂಶುವಿನ ಕಡುಗಪ್ಪಿನ ನೆರಳು

ಆವರಿಸಿ ಕ್ಷೀಣಿಸಿತು ನೇಸರನ ಕಿರಣಗಳನ್ನು.


ಚಂದಿರನ ಈ ನಡೆಯಿಂದ ಭುವಿಯಲ್ಲಿ

ಮನುಜರಿಗೆಲ್ಲಾ ನಿಶ್ಚಿಂತೆಯ ವಾತಾವರಣ.

ಕೊನೆಗೆ ಗ್ರಹಣ ಕಳೆದು ಸಂತಸ ತುಂಬಿ 

ಇಳೆಗೆ ಜಾರಿತು ಸೂರ್ಯನ ಹೊಂಗಿರಣ.



Rate this content
Log in

Similar kannada poem from Abstract