ಚಾಣಾಕ್ಷ
ಚಾಣಾಕ್ಷ
ಒಬ್ಬ ವ್ಯಕ್ತಿ ಒಂದೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಆಸ್ತಿ ಮಾಡಿದ್ದಾನೆ ಅಂತ ಎಲ್ಲಾಕಡೆ ಪುಕಾರು.
ಕೊನೆಗೆ ಇದು ದೆಹಲಿವರೆಗೂ ತಲುಪಿತು. ವಿಚಾರಿಸಲು ಇಬ್ಬರು ಅಧಿಕಾರಿಗಳನ್ನ ಕಳುಹಿಸಿದರು . ಅವರಲ್ಲಿ ಒಬ್ಬರು ಮೊದಲು ಕೇಳಿದ್ದು ನೀವು ಇಷ್ಟೊಂದು ಹಣ ಸಂಪಾದನೆ ಹೇಗೆ ಮಾಡಿದಿರಿ ಅಂಥ ಸುಮ್ಮನೆ ಸತ್ಯ ಹೇಳಿದರೆ ನಮ್ಮ ಸಮಯ ಉಳಿತಾಯ ಆಗುತ್ತೆ . ಅದಕ್ಕೆ ಹೇಳಿದ ಸಾರ್ ಇದು ನಾನು ನನ್ನ ಬುದ್ಧಿವಂತಿಕೆಯಿಂದ ಪಂದ್ಯದ ಲ್ಲಿ ಗೆದ್ದ ಹಣ . ಬೇಕೆಂದರೆ ಇಲ್ಲೇ ತೋರಿಸುತ್ತೇನೆ. ಒಬ್ಬ ರು ಇಲ್ಲೇ ಇರಿ ಒಬ್ಬರು ಬನ್ನಿ ಅಂಥ ಒಬ್ಬರನ್ನ ದೂರ ಕರೆದುಕೊಂಡು ಹೋಗಿ ಸಾರ್ ನಿಮ್ಮ ಜೊತೆಗೆ ಬಂದಿ ರುವವರ ಎಡದ ಕಣ್ಣು ಕಾಣಿಸಲ್ಲ ನಿಮಗೆ ಗೊತ್ತೇ ಅಂದ .ನೀನು ಸುಳ್ಳು ಹೇಳುತ್ತಿದ್ದೀಯೆ ಅವರಿಗೆ ಎರಡು ಕಣ್ಣು ಚನ್ನಾಗಿ ಕಾಣಿಸುತ್ತೆ ಅಂದರು . ಅವರನ್ನು ಆಮೇಲೆ ಕೇಳೋಣ. ಈಗ ಇದು ನಿಜವಾದರೆ ನೀವು ನನಗೆ ಇನ್ನೂರು ರೂಪಾಯಿ ಕೊಡಬೇಕು ಸುಳ್ಳಾದರೆ ನಾನು ನಿಮಗೆ ನಾಲ್ಕು ನೂರು ರೂಪಾಯಿ ಕೊಡ್ತೀನಿ ಅಂದ .
ಪಂದ್ಯದಲ್ಲಿ ಸೋಲಿಸಿ ಇವನ ಮಾತೆಲ್ಲಾ ಸುಳ್ಳು ಅಂಥ ಮೇಲಿನವರಿಗೆ ತಿಳಿಸಬಹುದು ಅಂಥ ಯೋಚಿಸಿ ಒಪ್ಪಿ ಕೊಂಡು ಇನ್ನೂರು ರೂಪಾಯಿ ಕೊಟ್ಟರು.ನಂತರ ಮತ್ತೊಬ್ಬರನ್ನ ದೂರ ಕರೆದು ಸಾರ್ ನಿಮ್ಮ ಜೊತೆಗೆ ಬಂದಿರುವ ವ್ಯಕ್ತಿ ನಿಮ್ಮ ಒಂದು ಕಣ್ಣು ಕಾಣಲ್ಲ ಅಂತ ನನ್ನೊಂದಿಗೆ ಪಂದ್ಯ ಕಟ್ಟಿದ್ದಾರೆ . ನಾನು ಹೇಳಿದೆ ಬೇಡಾ ಸಾರ್ ಅವರಿಗೆ ಎರಡೂ ಕಣ್ಣು ಚನ್ನಾಗಿ ಕಾಣತ್ತೆ ಅಂದ ರೂ ಒಪ್ಪಲಿಲ್ಲ .ಬೇಕಿದ್ದರೆ ನಿಮ್ಮ ಎದುರೇ ಕರೆದು ಕೇಳು ತ್ತೇನೆ ಎಂದ. ಇವರಿಗೆ ಈಗ ಸುಮ್ಮನೆ ಇರಲು ಆಗಲಿಲ್ಲ ತಾನೂ ಪಂದ್ಯಕ್ಕೆ ಮುಂದಾಗಿ ಹೇಳಿದರು ಅವನು ಸೋಲೋದು ಗ್ಯಾರಂಟಿ . ಅವನಿಗೆ ತೋರಿಸ್ತೀನಿ.ಅಂದರು. ಬೇಡ ಸಾರ್ ಅದರಿಂದ ನಿಮಗೇನೂ ಲಾಭ ಇಲ್ಲ ನನ್ನ ಮಾತು ಕೇಳಿ . ನಿಜ ನನಗೆ ಒಂದು ಕಣ್ಣು ಕಾಣಲ್ಲ ಅಂತ ಸುಮ್ಮನೆ ಹೇಳಿ . ನಿಮಗೆ ನಾನು ನೂರು ರೂಪಾಯಿ ಕೊಡ್ತೀನಿ ಅಂದ. ಒಂದು ಸುಳ್ಳಿಗೆ ನೂರು ರೂಪಾಯಿ ಬರೋ ಹಾಗಿದ್ದರೆ ಏಕೆ ಬಿಡಬೇಕು ಅಂತ ಒಪ್ಪಿ ಅವರ ಎದುರು ಹೌದೂ ರೀ ನನಗೆ ಒಂದು ಕಣ್ಣು ಕಾಣಲ್ಲ ನಾನು ನಿಮಗೂ ಇದುವರೆಗೂ ಹೇಳಿಲ್ಲ ಅಂದು ಬಿಟ್ಟ ರು. ಮೊದಲನೆಯವರಿಗೆ ತಿಳಿಯದ ಹಾಗೆ ನೂರು ರೂಪಾಯಿ ಮೊದಲೇ ಕೊಟ್ಟು ನೂರು ರೂಪಾಯಿ ಲಾಭ ಮಾಡಿಕೊಂಡಿದ್ದ.
ಈಗ ಇಬ್ಬರಿಗೂ ತಿಳಿಸಿ ಹೀಗೆ ಸರ್ ಜನರ ಹತ್ತಿರ ಪಂದ್ಯ ಕಟ್ಟಿ ನಾನು ಗೆಲ್ಲೋದು ಅಂದ. ಸೋತವರಂತೆ ಅವರಿಬ್ಬರೂ ಅಲ್ಲಿಂದ ಹೊರಟು ಅವರ ಮೇಲಧಿಕಾರಿ ಗೆ report ಮಾಡಿದಾಗ ಚೆನ್ನಾಗಿ ಬೈದು department ಗೆ ಅವಮಾನ ಅಂತ ಹೇಳಿ ಎಲ್ಲಾ ಕೆಳ ಹಂತದ ಅಧಿಕಾರಿಗಳನ್ನ ಕರೆದು ವಿಷಯ ತಿಳಿಸಿ ಅವನನ್ನ ಇಲ್ಲಿಗೆ ಬರಲು ಹೇಳಿ, ನಾನೇ ಅವನಿಗೆ ನಿಮ್ಮ ಮುಂದೆ ಸರಿಯಾಗಿ ಪಾಠ ಕಲಿಸ್ತೀನಿ ನೋಡ್ತಾ ಇರಿ ಅಂದರು.
ಹಾಗೆ ಅವನನ್ನ ಅಲ್ಲಿಗೆ ಕರೆಸಿದರು . ಎಲ್ಲಾ ಮೂವತ್ತು ಕೆಳವರ್ಗದ ಅಧಿಕಾರಿಗಳನ್ನ ಸೇರಿಸಿ ಅವರ ಎದುರೇ ಕೇಳಿದರು. ಏನಯ್ಯಾ ನಮಗೇ ಚಳ್ಳೆ ಹಣ್ಣು ತಿನ್ನಿಸಕ್ಕೆ ನೋಡ್ತೀಯ . ಅದಕ್ಕೆ ಅವನು ಇಲ್ಲಾ ಸಾರ್ ನಾನು ಹೇಳೋದು ನಿಜ ಬೇಕಾದ್ರೆ ನೋಡಿ ಈಗಲೂ ಹೇಳ್ತೇನೆ ನಿಮ್ಮ ಬೆನ್ನಲ್ಲಿ ಒಂದು ರೂಪಾಯಿ ಅಗಲದ ಕಪ್ಪು ಮಚ್ಚೆ ಇದೆ .ಇದ್ದರೆ ನೀವು ಐನೂರು ರೂಪಾಯಿ ಕೊಡಿ ಇಲ್ಲದಿದ್ದರೆ ನಾನು ಸಾವಿರ ಕೊಡ್ತೀನಿ ಅಂದ. ಆ ಮೇಲಧಿಕಾರಿಗೆ ಚೆನ್ನಾಗಿ ಗೊತ್ತು ಮಚ್ಚೆ ಇಲ್ಲ ಅಂತ. ಅಲ್ಲಿದ್ದ ಮೂವತ್ತು ಕೆಳಹಂತದ ಅಧಿಕಾರಿಗಳೂ ಒಂದಾಗಿ ಕೂಗಿ ಹೇಳಿದರು ಸಾರ್ ಶರ್ಟ್ ಬಿಚ್ಚಿ ತೋರಿಸಿ ಅವನಿಗೆ ಸರಿಯಾಗಿ ಪಾಠ ಕಲಿಸೋಣ ಅಂತ ಅವರಿಗೂ ಸರಿ ಅನಿಸಿ ಶರ್ಟ್ ಬಿಚ್ಚಿ ಬೆನ್ನು ತೋರಿಸಿದರು. ಮತ್ತೆ ಶರ್ಟ್ ಹಾಕ್ಕೊಂಡು ಅವನ ಹತ್ತಿರ ಸಾವಿರ ರೂಪಾಯಿ ತೆಗೆದು ಕೊಂಡು ನಕ್ಕು ಹೇಳಿದರು, ಇದಾ ನೀನು ಲಕ್ಷಾಂತರ ಗೆದ್ದ ರೀತಿ ಅನ್ನುವಷ್ಟರಲ್ಲಿ, ಹೌದು ಸಾರ್ ನೀವು ಸರಿಯಾಗಿ ಹೇಳಿದಿರಿ . ನಿಮ್ಮ ಶರ್ಟ್ ಹೇಗಾದ್ರೂ ಎಲ್ಲರ ಮುಂದೆ ಬಿಚ್ಚಿಸಿದರೆ ಐನೂರು ರೂಪಾಯಿ ಕೊಡಿ ಇಲ್ಲ ದಿದ್ದರೆ ನಾನು ಸಾವಿರ ಕೊಡ್ತೀನಿ ಅಂತ ಈ ಮೂವತ್ತು ಅಧಿಕಾರಿಗಳ ಹತ್ತಿರ ಪಂದ್ಯ ಕಟ್ಟಿದ್ದೆ , ಈಗ ನಿಮಗೆ ಸಾವಿ ರ ಕೊಟ್ಟರೂ ಹದಿನಾಲ್ಕು ಸಾವಿರ ನನಗೆ ಲಾಭ ಅಂದ. ಅಲ್ಲಿದ್ದ ಎಲ್ಲರೂ ಇವನ ಚಾಣಾಕ್ಷತಕ್ಕೆ ತಲೆ ತಗ್ಗಿಸಿ ಈ ವಿಷಯ ಹೊರಬರದ ಹಾಗೆ ಅವನಿಗೆ ತಾಕೀತು ಮಾಡಿ ಕಳುಹಿಸಿದರಂತೆ.