ಬ್ರಹ್ಮ ಗಂಟು
ಬ್ರಹ್ಮ ಗಂಟು
ತಮ್ಮ ಒಬ್ಬನೇ ಮಗನಾದ ಸುಮಂತ್ ಗೆ ಅದ್ದೂರಿಯಾಗಿ ಮದುವೆ ಮಾಡಬೇಕೆಂದು ಕನಸು ಕಂಡಿದ್ದ ಅವನ ಅಪ್ಪ ಅಮ್ಮ ನಿಗೆ, ಮಗ ತಾವು ತೋರಿಸಿದ ಯಾವ ಹುಡುಗಿಯನ್ನೂ ಒಪ್ಪದಿದ್ದಾಗ,ಅವರಿಗೆ ಯೋಚನೆ ಯಾಯಿತು.
ಕಡೆಗೆ ಹುಡುಗಿಯ ಆಯ್ಕೆ ಯನ್ನು ಅವನಿಗೇ ಬಿಟ್ಟರು.
ಸುಮಾರು ಎರಡು ತಿಂಗಳ ನಂತರ, ಒಂದು ದಿನ ಮಗ, ತನ್ನ ಕುತ್ತಿಗೆಗೆ ಹಾರಿ ಹಾಕಿಕೊಂಡು, ಒಬ್ಬ
ಹುಡುಗಿಯ ಜೊತೆ ಮನೆಯ ಬಾಗಿಲಲ್ಲಿ ನಿಂತಾಗ, ಸುಮಂತ್ ನ ಅಪ್ಪ ಅಮ್ಮ ನಿಗೆ ತುಂಬಾ ಶಾಕ್ ಆಯಿತು. ತಮ್ಮ ಮಗ ತಮಗೆ ಹೀಗೆ ಶಾಕ್ ಕೊಡುತ್ತಾನೆ ಎಂದು ಅವರು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ.
ಆದರೂ ಮಗ ಮದುವೆಯಾಗಿ ಬಂದಿರುವುದು ಅವರಿಗೆ ನೆಮ್ಮದಿ ತಂದಿತ್ತು. ಮಗನ ಆಯ್ಕೆಯನ್ನು ಒಪ್ಪಿಕೊಳ್ಳದೆ ಅವರಿಗೆ ವಿಧಿ ಇರಲಿಲ್ಲ.
ಒಲ್ಲದ ಮನಸ್ಸಿನಿಂದ ಮಗ ಸೊಸೆಗೆ ಆರತಿ ಮಾಡಿ ಒಳಗೆ ಕರೆದುಕೊಂಡರು.
ಕೊನೆಗೆ ಮಗನ ಆಯ್ಕೆಯ ಹುಡುಗಿ ತಮ್ಮ ಜಾತಿಯಲ್ಲಿ ವೆಂದು ತಿಳಿದಾಗ, ಒಳಗೊಳಗೇ ನೋವನ್ನು ನುಂಗಿದರು. ಬ್ರಹ್ಮ ಗಂಟನ್ನು
ಯಾರು ತಾನೇ ತಪ್ಪಿಸಿಯಾರು?