ದೀಪವಳಿಯ ಹೊನ್ನ ಕಿರಣ.
ದೀಪವಳಿಯ ಹೊನ್ನ ಕಿರಣ.

1 min

274
ಜೀವನವದು ಕಷ್ಟ ಸುಖಗಳ ಆಲಯ
ದಿನವು ಹೊಸ ಪ್ರಯತ್ನಗಳ ಹೂರಣ
ಇರಲಿ ಬದುಕಿನಲ್ಲಿ ಎಂದೂ ಸದಾಶಯ
ಮೂಡುವುದು ಆಗ ಬಾಳಿನಲ್ಲಿ ಹೊನ್ನ ಕಿರಣ.
ಬದುಕೆಂದರೆ ಕತ್ತಲೆ ಬೆಳಕಿನ ಪಯಣ.
ನೆಮ್ಮದಿಯ ಹುಡುಕಾಟದಲ್ಲಿ ಪ್ರತಿನಿತ್ಯ,
ಹೊರಾಡುವೆವು ಅರಿಯದೆ ನಿಜ ಕಾರಣ,
ತಿರುಗಿತಮದೊಳಗೆ ಕಳೆದೊಗುವೆವು ಇದು ಸತ್ಯ.
ಎಲ್ಲರ ಆಶಯವೊಂದೇ ಭುವಿಯಲ್ಲಿ,
ಪ್ರತಿಕ್ಷಣ ಕರ್ಮ ಫಲಗಳ ಬಯಸುತಲಿ,
ಮರೆಯದಿರಲಿ ನಿಷ್ಕಾಮ ಕರ್ಮವನ್ನು,
ತಮಸೋಮ ಜ್ಯೋತಿರ್ಗಮಯದಾಶಯವನು.