STORYMIRROR

Arjun Maurya

Action Inspirational Thriller

4  

Arjun Maurya

Action Inspirational Thriller

ಮೂಲಭೂತ

ಮೂಲಭೂತ

1 min
312

ಕ್ಷೀರದ ಕಡಲೇ ನೀ

ಉಕ್ಕಿ ಹರಿಯುತಿರು

ಬಡವರ

ಉದರನದಿಯಲಿ I

ಆದರೆ

ಕಲ್ಲಿನ ದೇವರ

ಕೆಳಗಡೆಯಲ್ಲ II


ಹಣವೇ....ನೀ

ಹಂಚಿಕೆಯಾಗು

ಬದುಕ‌ ಕನಸ ಹೊತ್ತ

ಹೊತ್ತೊತ್ತಿಗೂ

ಕಾಯುತಿರುವವರಲಿ I

ಆದರೆ

ಕಸದ ರಾಶಿಯಂತೆ

ಗುದ್ದಲಿಗಳಲಿ ತುಂಬುವ

ಭಂಡಾರಗಳ

ಕೋಣೆಗಳಲ್ಲಲ್ಲ II


ಓ ಅನ್ನವೇ ನೀ

ವರವಾಗು ಹಸಿದ

ಒಡಲುಗಳಿಗೆ I

ಆದರೆ

ತುಂಬಿದಹಂಕಾರದಿ

ಎಸೆದ ಕಸದ

ತೊಟ್ಟಿಗಳಲ್ಲಲ್ಲ II


ವಸ್ತ್ರವೇ ನೀ

ಸ-ಮಾನ ವಾಗಿ

ಆವರಿಸು ಎಲ್ಲೆಡೆ I

ಚಿಂದಿ ಇದ್ದ ಕಡೆ

ಹೊದಿಕೆಯಾಗು I

ಆದರೆ

ಬೆತ್ತಲೆಗೊಳಿಸುವ

ಕಚ್ಚೆಹರುಕರ

ಕ್ರೂರ ಮನಸುಗಳ

ಕೈಗಳಲ್ಲಲ್ಲ II


ಮನೆಯೇ ನೀ

ಗುಡಿಸಿಲಾದರೂ

ಪರವಾಗಿಲ್ಲ

ನೆಮ್ಮದಿಯ ತಾಣವಾಗು I

ಬಿಸಿಲುಮಳೆಗಾಳಿಗೆ

ರಕ್ಷೆಯಾಗು I

ಆದರೆ

ನಿಲ್ಲದಿರು ಶ್ರೀಮಂತರ

ನೂರಾರು ಕೊಠಡಿಗಳ

ಚಂದದ

ಅರಮನೆಯಾಗಿಯೇ II


ಜ್ಞಾನವೇ ನೀ

ಹರಿಯುವ ನದಿಯಾಗು

ಸಾರ್ವತ್ರಿಕವಾಗಿ

ಎಲ್ಲೆಡೆ ಎಲ್ಲರಿಗಾಗಿಯೂ I

ಆದರೆ

ನಿಂತ‌ ನೀರಾಗದಿರು

ವ್ಯಾಪಾರದ ವಸ್ತುವಾಗಿ

ಉಳ್ಳವರ ಪಾಲಾಗಿ

ಭಿನ್ನ ಭೇದ ಮಾಡದಿರು II


Rate this content
Log in

Similar kannada poem from Action