STORYMIRROR

Arjun Maurya

Tragedy Action Inspirational

4  

Arjun Maurya

Tragedy Action Inspirational

ಮುಖವಾಡ

ಮುಖವಾಡ

1 min
308

ನಗಲೇ ಬೇಕು ಸುಮ್ಮನಾದ್ರೂ

ಗೊತ್ತುಗುರಿಯು ಇಲ್ಲದಾಗ್ಲೂ..|

ನಗಲೂ ಶ್ರಮವಿದೆಯಾದ್ರೂ

ಬಚ್ಚಿಡಬೇಕು ನೋವನ್ನು.. 

ಅಲಂಕಾರದೊಳಗಿನ

ಮುರಿದ ಚೋಪಡಿಯಲಿ || 


ನಗುವ ಬೆಲೆಗಳ ಭೂತಗಳು 

ಸಹಸ್ರತುದಿಗಳ ಚುಚ್ಚು ಸಿಡಿಮದ್ದುಗಳು|

ಕಲುಷಿತವಾದ ಜಲದೇವತೆಗಳು

ಗಾಳಿಯ ವಿಷಸರ್ಪಗಳು ||


ಹಾಹಾಕಾರದೊಳು ಪ್ರತಿಭಟನೆಗಳು

ಅಣಬೆಗಳಂತೆ ಅಲ್ಲಲ್ಲಿ |

ಭರವಸೆ ಮುಖವಾಡ ಹುಸಿಮಾತುಗಳು

ನಿರ್ಧರಿಸಿರುವ ಕೇರಿಗಳಲ್ಲಿ ||


ಕಾಲು ಮುರಿದ ಕೌಶಲವು

ಖಾಸಗಿವಲಯದಲ್ಲಾಕಳಿಸುತ್ತಿರಲು |

ರಾಷ್ಟಿಯತೆಯ ಮುಖವಾಡ 

ಮನುನಿರ್ಧಾರ ಉರಿಯುತ್ತಿರಲು || 


ಶ್ರೀಮಂತಿಕೆ ಎಂಬ ಬಿಂಬ

ನೋವಮೇಲೆ ನಲಿವ ಹೊದಿಕೆ |

ಬೂಟುಗಾಲ ಗಟ್ಟಿಕಂಬ

ಗುಲಾಮಗಿರಿಯ ಬಳ್ಳಿ ಹೊದಿಕೆ ||


ರಸ್ತೆ ಬದಿಯ ಕಂದನಳಲು

ಅನ್ನಕ್ಕಾಗಿ ನಿರೀಕ್ಷೆಯೊಡಲು |

ಶಕ್ತಿಯಿಲ್ಲದಿದ್ದರೂನೂ

ಬೆನ್ನುಬಾಗುವಷ್ಟು ನೋವು ||


ಊರ ತುಂಬಾ ಹಬ್ಬದಬ್ಬರ

ಗಾಯದೊಳಗಿನ ಹಣದುಬ್ಬರ |

ಬಡಕಲಮ್ಮನ ದೇಹಕ್ಕೊಂದು 

ಶ್ರೀಮಂತಿಕೆಯ ಸೀರೆಯಬ್ಬರ ||


ಕಾಂಕ್ರೀಟು ಕಾಡಿನೊಳಗೆ 

ಕೇಳದಂತ ಗ್ರಾಮ್ಯಗಾನ |

ಹುಸಿಧರ್ಮದಬ್ಬರದಲೀ

ಬಡಕಲಾದ ಮನುಜಗಾನ || 



Rate this content
Log in

Similar kannada poem from Tragedy