ಕೃಷ್ಣ
ಕೃಷ್ಣ
ಹೆತ್ತ ಮಕ್ಕಳು ಹೂತಿಟ್ಟ ಹಣಕ್ಕೆ ಹೆಣವಾಗಿಸುವರು
ಸಂಬಂಧಿಕರು ಸ್ವರ್ಗ/ನರಕಕ್ಕೆ ಸೇರಿದಮೇಲೆ ಬರುವರು
ಮಡದಿ ಮಕ್ಕಳ ಮೋಹದಲ್ಲಿ ಮಾನವೀಯತೆ ಮರೆವರು
ಇಷ್ಟಾದರೂ ಕರಗಲಿಲ್ಲವೇ ಹಣದ ದಾಹ
ಮುಳುಗಿ ಹೋಗುತ್ತಿದೆ ಮೆನೆ ಮಠ ಜಲದಲ್ಲಿ
ಕರಗಿ ಮಣ್ಣಾಗುತ್ತಿದೆ ಒಡಲು ನೆಲದಲ್ಲಿ
ಭುವಿಯೋ ಆಗಸವೋ ಮಸುಕಾಗಿದೆ ಮಂಜಿನಲಿ
ಹೊತ್ತು ಹೋಗುವುದೇನಿದೆ ಅಂತ್ಯದಲ್ಲಿ
ಇಷ್ಟದರೂ ಕರಗಲಿಲ್ಲವೇ ಹಣದ ದಾಹ
ಬಡತನ ಸಿರಿತನ ಮನುಜನ ಹುಚ್ಚುತನ
ಹಂಚಿ ತಿನ್ನುವುದು ಕಲಿ ಪ್ರಾಣಿ ಪಕ್ಷಿ ಗಳಿಂದ
ಮಾನವನ ಜನ್ಮ ಶ್ರೇಷ್ಠ ವೆಂದರೂ
ಸಾರ್ಥಕ ಪಡಿಸಿಕೊಳ್ಳ ಬೇಕು ಸಜ್ಜನರಿಂದ
ನೀಗಿಸಿಕೋ ಮೋಹ ಪಾಷಗಳು ಮನದಿಂದ