STORYMIRROR

Sulochana C.M.

Abstract

3  

Sulochana C.M.

Abstract

ಹವಾಗುಣ.

ಹವಾಗುಣ.

1 min
15

ಪ್ರಕೃತಿಯ ಚರಣಗಳೇ ಹವಾಗುಣದ ಲಕ್ಷಣ.
ಈಗ ಸಧ್ಯ ಎಲ್ಲೆಡೆ ಒಂದೇ ಮಾತು.ಬಿಸಿಲು.
ಬಿಸಿಲ ಬೇಗೆ,ಧಗೆ,ಜಲಕ್ಷಾಮ ಕುರಿತೇ ಮಾತು
ಹೌದು ಇಂದು ಬರಗಾಲ ಭೀತಿಯ ಹವಾ.
  ಕೆಲದಿನವಷ್ಟೇ.ಬಂತು ಯುಗಾದಿ.
ಏನಿರಲಿ ಬಿಡಲಿ ಸಂಭ್ರಮ ಕ್ಕೆ ಅದು ಆದಿ.
ಆಗಲೇ ಆರಂಭ ತುಂತುರು ಮಳೆನೀರು.
 ಆಷಾಡಕ್ಕೆ ಜಡಿಮಳೆ,ತುಂಬಿ ಹರಿವ ಹಳ್ಳ,ಹೊಳೆ.ಬೆಂಹಿಡದೆ ಜಿಟಿಜಿಟಿ ಜಿನುಗು.
ಈಗ ಆಕ್ಷೇಪಣೆಯ ಗುನುಗು.ಯಾವಾಗ ನಿಂತೀತು ಮಳೆ.ಮುಗಿಲಿಗೆ ಹೊಲಿಗೆ ಹಾಕಿರಿ
ಎಂಬುದೇ ಎಲ್ಲರ ತಗಾದೆ.
  ಮಳೆಗೆ ಮಿಂದ ತಣ್ಣನೆಯ ಮೇಲಿಂದ 
ಗಾಳಿ ಬೀಸಿತೋ ಅದೋ ಚಳಿಗಾಳಿ.ಚಳಿ ಚಳಿ ತಾಳಲಾರ ಮಾನವ.ಇಲ್ಲಿ ಯಾವುದೂ ಶಾಶ್ವತವಲ್ಲಾ.ಆದರೂ ಅರೆಗಳಿಗೆ ವ್ಯತ್ಯಾಸ ಸಹಿಸಲೊಲ್ಲ ಮಾನವ.ಇದು ಇರುವುದೇ ಹೀಗೆ .ಕಾರಣ ಇದು ಋತುಮಾನ.ಇದ ಸಹಿಸಲೇ ಬೇಕು ಮಾನವ.ಹವಾಮಾನದಂತೆ ಮುನ್ನಡೆದರದೇ ಹಿತವು ಮಾನವನಿಗೆ.ಸಿಎಂಸು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract