ಅಮೃತ ಮಹೋತ್ಸವ
ಅಮೃತ ಮಹೋತ್ಸವ
ಭರತ ಖಂಡ ಕಂಡ ಕನಸ್ಸು ನನಸ್ಸಾದ ಸುದಿನ
ಸಹಸ್ರ ಜ್ಯೋತಿಗಳ ತ್ಯಾಗಕ್ಕೆ ನಮ್ರತೆಯ ನಮನ
ನೆತ್ತರು ಹರಿಸಿತು ಕಣ್ಣೀರು ಸುರಿಸಿತು ಪರಕಿಯರ ದೌರ್ಜನ್ಯ
ಬಿಳಿ ಕುನ್ನಿಗಳ ಹೆಡೆಮುರಿ ಕಟ್ಟಿದ ಕಥೆಯೇ ಅಸಾಮಾನ್ಯ
ವೀರ ಮರಣವ ಅಪ್ಪಿಕೊಂಡರು ಧೀರರು
ಬ್ರಿಟಿಷ್ ಬಂಡಾಯದ ವಿರುದ್ಧ ಸಿಡಿದೆದ್ದರು
ಶಾಂತಿ ಕ್ರಾಂತಿ ಹೋರಾಟದ ಮಜಲುಗಳಿಗೆ ಸಿಕ್ಕ ಉತ್ತರ
ಭಾರತೀಯರಿಗೆ ಭಾರತವ ಆಳುವ ಸಾರ್ವಭೌಮ ಅಧಿಕಾರ
ಉತ್ತರದಲ್ಲಿ ಕಿಡಿ ಹೊತ್ತಿದ ಸ್ವಾತಂತ್ರ್ಯದ ಜ್ವಾಲೆ
ದಕ್ಷಿಣದಲ್ಲೂ ಎಬ್ಬಿಸಿತು ದೇಶ ಪ್ರೇಮದ ಅಲೆ
ಎಲ್ಲೆಲ್ಲೂ ಮೊಳಗಿತು ಬಾನು ಭುವಿ ಒಂದಾಗೋ ಹಾಗೆ
ಸ್ವಾತಂತ್ರ್ಯ ಸಿಕ್ಕಿ ಭಾರತಾಂಬೆ ಚೆಲ್ಲಿದಳು ನಗೆ