STORYMIRROR

Gireesh pm Giree

Inspirational

2  

Gireesh pm Giree

Inspirational

ಶಿಕ್ಷಣ

ಶಿಕ್ಷಣ

1 min
275

ಲೋಕದ ಜ್ಞಾನ ಅರಿಯಲು ಬೇಕು ಸಾಮಾನ್ಯ ಜ್ಞಾನ

ಮಾತೆ ತಿಳಿಸುತ್ತದೆ ನಿನ್ನ ಸ್ಥಾನ

ಸಣ್ಣ ಸಣ್ಣ ವಿಷಯಕ್ಕೂ ನೋವು ಬೇಡ ಅಳುಕಬೇಡ ನೀನ

ಅವಮಾನ ಮೆಟ್ಟಿ ನಿಂತರೆ ಮುಂದಿದೆ ನಿನಗೆ ಸನ್ಮಾನ


ಏನು ಗೊತ್ತಿಲ್ಲ ಎಂದು ಕೈಕಟ್ಟಿ ಕೊಳ್ಳಬೇಡ

ಎಲ್ಲವೂ ನಾನು ನನ್ನಿಂದಲೇ ಎಂದು ಉಹಿಸಬೇಡ

ಹಸಿವು ಎಂದು ಬಂದವರಿಗೆ ಊಟ ಹಾಕು

ಅತಿಥಿಗಳು ಮನೆಗೆ ಬಂದರೆ ಆಡುವ ನಾಲ್ಕು ಮಾತು ಸಾಕು


ಜೀವನ ಹಾದಿಯು ಸುಗಮವಲ್ಲ ತಿಳಿ

ಬರುವ ಕಷ್ಟನಷ್ಟಗಳನ್ನು ಎದುರಿಸಲು ಇರಲಿ ಧೈರ್ಯ ಬಳಿ

ಏನೇ ನೋವು ನಲಿವು ಬದುಕಿನಲ್ಲಿ ಬರಲಿ

ಅದೇ ನಿಭಾಯಿಸುವ ಶಕ್ತಿ-ಯುಕ್ತಿ ನಿನ್ನೊಳಗೆ ಸದಾ ಇರಲಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational