STORYMIRROR

Lakumikanda Mukunda

Abstract Inspirational

2  

Lakumikanda Mukunda

Abstract Inspirational

ಗ್ರಹಣ ಹಿಡಿದದ್ದು ಯಾರಿಗೆ

ಗ್ರಹಣ ಹಿಡಿದದ್ದು ಯಾರಿಗೆ

1 min
100

ಅಧಿಕಾರದ ಮದವೇರಿ ಕುರ್ಚಿಗಾಗಿ

ಕಾದಾಡಿ ಅರಿವಳಿದವಗೆ ಹಿಡಿದಿದೆ ಗ್ರಹಣ

ಇಲ್ಲದವರ ದಳ್ಳುರಿಯ ಕಿಡಿ ತಾಕಿ

ಉಳ್ಳವರ ಅಹಂ ಸುಟ್ಟು ಹಿಡಿದಿದೆ ಗ್ರಹಣ


ಮಾನವ ಧರ್ಮದ ನಿಜವರಿಯದ

ನರಮೇಧದ ಕತೃಗಳಿಗೆ ಹಿಡಿದಿದೆ ಗ್ರಹಣ..

ನರನೇ ಹರನೆಂದು ಮೇರೆದ ಕಾಲಕ್ಕೆ

ಕೆಂಡಕಾರುವ ವೈರಿಗಳ ವರ್ಗಕ್ಕಿದೆ ಗ್ರಹಣ


ಭಾರತದ ಏಕತೆಯ ಜೇನುಗೂಡಿಗೆ

ಕಲ್ಲೆಸದ ಖಧೀಮರಿಗೆ ಹಿಡಿದಿದೆ ಗ್ರಹಣ..

ಹೆಣ್ಣು ಹಣ್ಣೆಂದು ಉಂಡೊಗೆದಾತಂಗೆ

ಎನೂ ಮಾಡದ ಕಾನೂನಿಗಿದೆ ಗ್ರಹಣ..


ಸೌಂದರ್ಯ ಲಾಲಸೆಯಲಿ ಮೊಳಗಿದ

ಪಾಪಿಗಳ ಕೂಪದಡಿಲಿದೆ ಕರಾಳ ಗ್ರಹಣ.

ಎಲ್ಲ ತಿಳಿದು ತಪ್ಪೆಸೆಗುವ ಮನುಕುಲದ

ನಿರ್ಣಾಮಕ್ಕೆ ಕಾರಣವಾಗದೆ.? ಗ್ರಹಣ.!


Rate this content
Log in

Similar kannada poem from Abstract