ಭೂತಾಯಿ ಚೊಚ್ಚಲ ಮಗ
ಭೂತಾಯಿ ಚೊಚ್ಚಲ ಮಗ
ನೇಸರದಿ ರವಿ ಮೂಡಿ ಬರತ
ಹೋರಡುವ ಕೆಲಸಕೆ ರೈತನಿತ
ಬೇಸರಿಸದೆ ನಗು ಮೊಗದ ಯೋಗಿ
ನಿಷ್ಕಲ್ಮಷದವನೇ ನಮ್ಮ ಅನ್ನದಾತ
ಭೂತಾಯಿಯ ಚೊಚ್ಚಲ ಮಗನಿತ
ಜೀವದ ಉಸಿರಿಗೆ ಪ್ರಾಣದಾತ
ಕೋಟಿ ಆಸ್ತಿ ಪ್ರಯೋಜನವಿಲ್ಲ
ಕಷ್ಟಪಡುವವನೇ ನಮ್ಮ ಅನ್ನದಾತ
ಹಗಲಿರುಳು ದುಡಿಯುವ ನೋಡಿ
ಮಣ್ಣಿನ ಜೊತೆ ಒಂದುಗೂಡಿ
ನೆಲ ಹದವ ಮಾಡಿ ಉತುಬಿತ್ತುವ
ಮಣ್ಣಿನ ಮಗನೇ ನಮ್ಮ ಅನ್ನದಾತ
ಎತ್ತುಗಳೇ ಇವನ ಸ್ನೇಹಿತರು
ಸಲಕರಣಗಳೇ ಆಯುಧಗಳು
ನಿತ್ಯದಲಿ ಹೋರಾಟ ಸೃಷ್ಟಿಯಲಿ
ಹೋರಾಟಗಾರನೇ ನಮ್ಮ ಅನ್ನದಾತ
ದೇಶದ ಬೆನ್ನೆಲಬು ಅನ್ನುವರು
ಮೋಸಕೆ ಒಳಪಡುವನಿವನು
ಬೆಳೆದ ಬೆಳೆಗೆ ಬೆಲೆಯಿಲ್ಲ
ಬಲಿಯಾಗುವನೇ ನಮ್ಮ ಅನ್ನದಾತ
ಹೊಗಳಿ ಹಾಡಿದರೆ ಪರಿಹಾರವಲ್ಲ
ಅವನ ಕಷ್ಟಗಳಿಗೆ ಸ್ಪಂದಿಸಿರಿ ಎಲ್ಲಾ
ನೇಣಿಗೆ ಹೋಗದಿರಿ ರೈತಭಾಂಧವರೆ
ನನ್ನ ವಿನಂತಿ ನಿಮಗೆ ಅನ್ನದಾತರೇ
ಸಮಸ್ಯೆಗೆ ನೂರೆಂಟು ಮಾರ್ಗವುಂಟು
ಕೇಳಿ ತಿಳಿಯಿರಿ ಬಾಳು ಹೊನಲುಂಟು
ನೀವೇ ದೇಶದ ಆಧಾರ ಸ್ತಂಭವುಂಟು
ಪ್ರಿಯ ರೈತರೇ ಕೇಳಿ ಅನ್ನದಾತರೇ