ದೀಪಾವಳಿ
ದೀಪಾವಳಿ
ಅಶೋಕ್ ಅನುಪಮ ಅವರ ಮೊದಲ ದೀಪಾವಳಿ ಹಬ್ಬ.
ಅತ್ತೆ ಮಾವ ಹಬ್ಬದ ಬಗ್ಗೆ ಹೇಳುತ್ತಾ ಹೋದಂತೆ ಅನುಪಮ ಕೂಡ ಆ ಹಬ್ಬದ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ಹಬ್ಬದಲ್ಲಿ ಪಾಲ್ಗೊಂಡಿದ್ದಳು. ಲಕ್ಷ್ಮಿ ಪೂಜೆಯೊಂದಿಗೆ ದೀಪಗಳ ಜೊತೆ ಅವಳು ಆ ಮನೆಯ ಮಹಾಲಕ್ಷ್ಮಿ ಆಗಿದ್ದಳು.
ಅನುಪಮಾಗೆ ದೀಪಾವಳಿ ಅಂದ್ರೆ ಬರೀ ಪಟಾಕಿ ಹೊಡೆಯುವುದು ಅಷ್ಟೇ ಗೊತ್ತಿತ್ತು. ಈ ವರ್ಷ ಅವಳ ಹಬ್ಬ ಬೇರೆಯದೇ ಲೋಕಕ್ಕೆ ಕರೆದೊಯ್ಯುವಂತೆ ಅನಿಸಿತು.
ಖುಷಿಯಿಂದ ಸಂಜೆ ದೀಪಗಳನ್ನು ಹಚ್ಚಲು ಹೋದಳು. ಬಾಗಿಲ ಮೆಟ್ಟಿಲುಗಳ ಮೇಲೆ ಸಾಲು ಸಾಲು ದೀಪಗಳನ್ನು
ಇಟ್ಟು ಹಚ್ಚಿದಳು. ಎಣ್ಣೆ ಖಾಲಿ ಆಯಿತು ಅಂತ ಮೆಟ್ಟಿಲಿನಿಂದ ಇಳಿಯುವಾಗ ಜಾರಿ ಬಿದ್ದು ಕಾಲು ಉಳುಕಿಸಿಕೊಂಡಳು .
ಅಶೋಕ ಮತ್ತೆ ಅವಳನ್ನು ಹಾಸ್ಪಿಟಲ್ಗೆ ತೋರಿಸಿ, ಉಪಚರಿಸಿದ .
ಈ ಹಬ್ಬ ಅವಳಿಗೆ ಮತ್ತೆ ಮರೆಯದ ದೀಪಾವಳಿ ಆಯಿತು.
ತನ್ನ ನೆಚ್ಚಿನ ಪಟಾಕಿ ಹೊಡೆಯಲು ಆಗಲಿಲ್ಲವಲ್ಲ ಎಂದು ಒಂದು ಸಣ್ಣ ನಗೆ ಮೂಡಿದರೂ ಅತ್ತೆ ಮಾವನ ಜೊತೆ ಆಚರಿಸಿದ ಈ ದೀಪಾವಳಿ ಅವಳಿಗೆ ಮನಸ್ಸಿಗೆ ಹತ್ತಿರವಾಗಿತ್ತು