ಅರಿವಿನ ಜ್ಯೋತಿ
ಅರಿವಿನ ಜ್ಯೋತಿ
ಅರಿವಿನಸ್ತುತಿ ಜ್ಞಾನ ಜ್ಯೋತಿ ಬೆಳಗಿಸಿ
ಬದುಕಿನ ಪುಟಗಳಿಗೆ ಹೊಸ ಹುರುಪ ರೂಪಿಸಿ
ಅಜ್ಞಾನ ಅಂಧಕಾರವ ತೊಲಗಿಸಿ ಅಳಿಸಿ
ಸುಜ್ಞಾನ ಕುಸುಮ ಬಾಳಲ್ಲಿ ಅರಳಿಸಿ
ಸರ್ವರಲ್ಲೂ ಸಹಬಾಳ್ವೆ ಸಮಾನತೆ ಸಮನ್ವಯ ಚಿಂತನೆ ಉತ್ತು
ಒಂದೇ ಜಾತಿ -ಮತ ಒಬ್ಬನೇ ದೇವನೆಂಬ ತತ್ವ ಬಿತ್ತು
ಮನುಷ್ಯ ಧರ್ಮವೇ ಹಿರಿದೆಂದು ಒಪ್ಪಿಸುವಲ್ಲಿ ಜಗತ್ತು
ಗುರುವಿನ ಚಿಂತನೆ ಮಂಥನೆ ಯಶಸ್ಸಿನ ಬೆಳಕಾಯಿತು
ತನ್ನ ಧರ್ಮ ಸಿದ್ಧಾಂತ ಶ್ರೇಷ್ಠ ಎನ್ನುವವನು ಗುರುವಾಗನು ಎಂದೂ
ಸರ್ವಧರ್ಮ ಶ್ರೇಷ್ಠವೆಂದು ಸಾರುವಾತ ವಿಶ್ವಗುರುವಾಗುವನು ಎಂದೆದೂ
ಜಾತ್ಯಾತೀತ ತೊಟ್ಟಿಲು ತೂಗುವ ದೇಶ ನಮ್ಮ ಭಾರತ
ಆದುದರಿಂದಲೇ ಜಗಕ್ಕೆ ಜ್ಞಾನ ಜ್ಯೋತಿ ನಮ್ಮ ಭಾರತ
ನಿನ್ನ ಮೊದಲು ಪ್ರೀತಿಸು ನೀನಿರುವ ಸಮಾಜ ಪ್ರೀತಿಸು
ಬೇಡ ಮುನಿಸು ನಾಲ್ಕು ದಿನ ನಮ್ಮ ಆಯಸ್ಸು
ಗುರುವು ಅಕ್ಷರಕ್ಕೆ ಸೀಮಿತನಾಗಿಲ್ಲದ ಸಂತ
ಅಕ್ಷರ ಸಾಗರ ಹೊರತಾಗಿಯೂ ಬದುಕಿಗೆ ನೀತಿ ಹೇಳಿದಾತ