ಅಂಬಿಗನು ದಡ ಸೇರಿಸದಿರುವನೇ?!
ಅಂಬಿಗನು ದಡ ಸೇರಿಸದಿರುವನೇ?!
ಜೀವನ ನಮ್ಮದಾದರೂ ಬದುಕ ನಡೆಸುವ ಅಂಬಿಗನು ಅವನು
ಅವನ ಇಚ್ಛೆಯಂತೆ ನಡೆಯುವ ಪಾತ್ರಧಾರಿಗಳಷ್ಟೇ ನಾವು!!
ನಡೆದಿದ್ದು, ನಡೆಯುವುದು, ನಡೆಯಲಿರುವುದು ನಮ್ಮ ಕೈಯಲ್ಲಿಲ್ಲ
ವೃಥಾ ಯೋಚಿಸಿದರೆ ಆರೋಗ್ಯ ಹಾನಿಯು ಹೊರತು ಪ್ರಯೋಜನವಿಲ್ಲ
ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸದೆ ಎಲ್ಲಾ ಭಗವಂತನ ಇಚ್ಛೆಯಂತೆಂದು
ಪಾಲಿಗೆ ಬಂದಿದ್ದೇ ಪಂಚಾಮೃತವೆಂದು ನಮ್ಮಲ್ಲಿ ತೃಪ್ತಿ ತಂದುಕೊಂಡು
ಆದದ್ದು, ಆಗಿದ್ದು, ಆಗಲಿರುವುದೆಲ್ಲಾ ಒಳಿತಿಗೆಂದು ಸ್ವೀಕರಿಸಿದರೆ
ಅದುವೇ ನೆಮ್ಮದಿಯಲ್ಲವೇ?!, ಎಲ್ಲವೂ ಆ ದೇವಗೆ ಬಿಟ್ಟು
ಭಕ್ತಿಯಿಂದ ಅವನ ಉಪಾಸನೆ ಮಾಡಿದರೆ ಅಂಬಿಗನು ದಡ ಸೇರಿಸದಿರುವನೇ?!