ಬದಲಾದ ಮನ
ಬದಲಾದ ಮನ
ಒಂದು ಸಣ್ಣ ಗ್ರಾಮ. ಅಲ್ಲಿ ಒಂದು ಪುಟ್ಟ ಮನೆ. ಅವರ ಕಾಯಕ ಕೃಷಿ ಕೆಲಸವಾಗಿತ್ತು. ಆ ಮನೆಯವರೂ ಕೃಷಿಯಲ್ಲಿ ತೊಡಗುತ್ತಿದ್ದರು. ಮನೆಯವರಲ್ಲಿ ಒಬ್ಬನಾದ ರಾಮು ಎಂಬವನು ಜೀವನಕ್ಕೆ ಹೊಂದಿಕೊಂಡ ಹಾಗೂ ಪೇಟೆಯ ವ್ಯವಹಾರಗಳನ್ನು ಮಾಡುತ್ತಿದ್ದ -ರತು ಅವನು ಹಳ್ಳಿ ಜೀವನಕ್ಕೆ ಹೊಂದುತ್ತಿರಲಿಲ್ಲ. ಹಳ್ಳಿಯೆಂದರೆ ಅವನಿಗೆ ತುಂಬಾ ಆದ ಕಾರಣ ಅವನು ಪೇಟೆಯ ಕಡೆಗೆ ಹೋಗುತ್ತಾನೆ. ಅವನ ಮನೆಯ ನೆನವು - ಯವುದಿಲ್ಲ. ಪೇಟೆಗೆ ಹೋದವ ಪುನಃ ಹಳ್ಳಿಗೆ ಮರಳಿ ಬರಲಿಲ್ಲ.
ಬೇಟಿಯಲ್ಲಿ ಅವನಿಗೆ ತುಂಬಾ ಗೆಳೆಯರು ಇದ್ದರು. ಎಲ್ಲಾ ವಿಷಯವನ್ನು ಅದರಲ್ಲಿಯೇ ಹೇಳುತ್ತಿದ್ದ. ಮೊದಲು ಗೆಳೆಯರು ಎಲ್ಲದಕ್ಕೂ ಸಹಾಯ ಮಾಡುತ್ತಿದ್ದರು. ಕ್ರಮೇಣ ಆವನಿಗೆ ಸರಕಾರಿ ಹುದ್ದೆ ದೊರೆಯಿತು. ಅದನ್ನು ಅವನಿಗೆ ಸರಿಯಾಗಿ ಭಾಯಿಸಲು ಆಗುತ್ತಿರಲಿಲ್ಲ. ಅವನು ಹೀಗೆ ಗೆಳೆಯರಲ್ಲಿ ಸಹಾಯ ಕೇಳುವಾಗ ಸಮ್ಮಿಂದ ಸಾಧ್ಯವಿಲ್ಲ “ನೀನು ಏನು ಬೇಕಾದರೂ ಮಾಡಿಕೋ, ನಾವಿನ್ನು ನಿನ್ನ ವಿಷಯಕ್ಕೆ ತಲೆ ಹಾಕುವುದಿಲ್ಲ, ನಿನ್ನ ದಾರಿ ನಿನಗೆ ನಮ್ಮ ದಾರಿ ನಮಗೆ” ಎಂದು ಹೇಳಿದರು. ಈ ಮಾತುಗಳನ್ನು ಕೇಳುವಾಗ ರಾಮುವಿಗೆ ತುಂಬಾ ಬೇಸರವಾಯಿತು. ಇವನು, ನಾನು ನನ್ನ ಗೆಳೆಯರನ್ನು ನಂಬಿ ಮೋಸ ಹೋದೆ. ನನಗೆ ದೊರೆತ ಲವನ್ನು ಸರಿಯಾಗಿ ಮಾಡಲು ಆಗುವುದಿಲ್ಲ ಎಂದು ಯೋಚಿಸಿದ. ನಾನು ಏನು ಮಾಡಲಿ? ನನಗೆ ಯಾರು ಸಹಾಯ ಮಾಡುತ್ತಾರೆ? ನಾನೇ ನನ್ನ ದಾರಿಯನ್ನು ಸಿಡುಕೊಳ್ಳಬೇಕು, ಆದರೆ ತಾಮುವಿಗೆ ಸತ್ಯವನ್ನರಿಯಲು ಹೆಚ್ಚು ಸಮಯ ಹಿಡಿಯಲಿಲ್ಲ ರ್ಮೇಣ ಪೇಟೆಯ ಯಾಂತ್ರಿಕ ಬದುಕು ದುಸ್ತರವೆನಿಸಿತು. ಹೀಗೆ ಯೋಚನೆಮಾಡುತ್ತಿರುವಾಗ ರಾಮನಿಗೆ ಹಳ್ಳಿಯ ಯೋಚನೆ ಬಂತು. ಹಳ್ಳಿಯಲ್ಲಿ ಇರುತ್ತಿದ್ದರೆ ನಾನು ಇಷ್ಟು ಕಷ್ಟಪಡಬೇಕಾಗುತ್ತಿರಲಿಲ್ಲ. ನಾನೇ ನನ್ನ ದಾರಿಗೆ ಮುಳ್ಳಾದೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಗಾದೆ ಮಾತಿನ ಅರ್ಥದಂತೆ ಆಯಿತು ನನ್ನ ಕಿ. ಹೀಗೆ ಕುಳಿತರೆ ಆಗಲಿಕ್ಕಿಲ್ಲ, ಪೇಟೆಯಿಂದ ಮೊದಲು ಹಳ್ಳಿಗೆ ಹೋಗಬೇಕು. ರಾಮ ಪೇಟೆಯಲ್ಲಿ ಕೆಲಸವನ್ನು ಬಿಟ್ಟು ಹಳ್ಳಿಯ ಕಡೆಗೆ ಹೋಗುತ್ತಾನೆ,
ಹಳ್ಳಿಗೆ ಹೋದ ತರುವಾಯ ಮನೆಯವರೊಂದಿಗೆ ಸೇರಿ ಕೃಷಿ ಕೆಲಸ ಮಾಡಲು ಗದ್ದೆಗೆ ಹೊರಡುತ್ತಾನೆ. ಅವನಿಂದ ಮೊದ ಮೊದಲು ಕೆಲಸ ಮಾಡಲು ಸಾಧ್ಯ ವಾಗುತ್ತಿರಲಿಲ್ಲ. ಮೆಲ್ಲ ಮಲ್ಲನ ಕೆಲಸವನ್ನು ಕಲಿಯುತ್ತಾನೆ. ಮನಸ್ಸಿದ್ದರೆ ಮಾರ್ಗ ಎನ್ನುವ ಗಾದೆಯಂತೆ ಮನಸ್ಸಿದ್ದರೆ ಯಾವ ಕೆಲಸವನ್ನು ಮಾಡಬಹುದು. ಒಂದು ಕೆಲಸದಲ್ಲಿ ಏಕಾಗ್ರತೆ ಇಟ್ಟು ಮಾಡಬೇಕು. ಹೀಗೆ ರಾಮ ಶ್ರಮವಹಿಸಿ ಕೃಷಿ ಕೆಲಸಗಳನ್ನು ಮಾಡುತ್ತಾ ಒಳ್ಳೆಯ ಕೃಷಿಕನಾಗುತ್ತಾನೆ. ಈ ರೀತಿಯಲ್ಲಿ ಮನಃಪರಿವರ್ತನೆಯಿಂದಾಗಿ ಅವನ ಜೀವನವೇ ಬದಲಾಯಿತು. ಮನಸ್ಸಿದ್ದರೆ ಯಾವ ದಾರಿಯೂ ಕಾಣುತ್ತದೆ. ಯಾವತ್ತೂ ಯಾವುದೇ ಕೆಲಸವಾದರೂ ಮನಸ್ಸು ಮುಖ್ಯ.