ಹಣತೆ ಹಚ್ಚಿಡುವ ಮುನ್ನ
ಹಣತೆ ಹಚ್ಚಿಡುವ ಮುನ್ನ
ಮತ್ತೊಮ್ಮೆ ಯೋಚಿಸು
ಹಣತೆ ಹಚ್ಚಿಡುವ ಮುನ್ನ,
ನೀ ಹಚ್ಚುವ ಹಣತೆ
ಬರೀ ಮನೆಯ ( ಹೊಸ್ತಿಲು ) ದೀಪವಾಗದೇ,
ದೂರ ದೂರ ಹರಡಬೇಕು.
ಆ ಹಣತೆಯ ಕಿರಣದಿಂದ,
ಪ್ರೀತಿ ಕರುಣೆಯು ಬೆಳಗಿ
ಮನೆ ಮನೆಗೂ ನಂದಾದೀಪವಾಗಬೇಕು.
ನೀ ಹಚ್ಚಿಟ್ಟ ಹಣತೆಯಿಂದ
ಬೆಳಗಿದ ಬೆಳಕಿನ ಕಿರಣಕೆ
ಜನರಲ್ಲಿ ಮೂಡಿದ
ದ್ವೇಷ , ರೋಷ ಅಳಿಸಿ
ಸ್ನೇಹದ ಸಂಕೋಲೆ ಬೆಸೆಯಬೇಕು.
ಹಣತೆ ಹಚ್ಚಿಡುವ ಮುನ್ನ
ಮತ್ತೊಮ್ಮೆ ಯೋಚಿಸು,
ಹಚ್ಚಿಟ್ಟ ಹಣತೆಯ ತುಂಬ
ಪ್ರೀತಿ , ಸ್ನೇಹದ
ಎಣ್ಣೆ , ಬತ್ತಿ
ಸದಾ ತುಂಬುತ್ತಲೇ ಇರಬೇಕು !