ಭಯಾನಕ ಭೂತ
ಭಯಾನಕ ಭೂತ
ಅದೊಂದು ಭಯ ಹುಟ್ಟಿಸುವಂತಿರುವ ಅರಣ್ಯ. ಅಲ್ಲಿ ಹಲವು ವರ್ಷಗಳಿಂದ ಭಯಾನಕ ಭೂತವು ನೆಲೆಸಿದ್ದ ಭಯಾನಕ ಕಥೆಯನ್ನು ಹಿರಿಯರು ಹೇಳುತ್ತಿದ್ದರು. ಒಮ್ಮೆ ಮಧ್ಯರಾತ್ರಿಯ ಸಮಯದಲ್ಲಿ ಪರವೂರಿನ ಬ್ರಾಹ್ಮಣನೊಬ್ಬ ಆಕಸ್ಮಿಕ ಕಾರ್ಯನಿಮಿತ್ತ, ಅದೇ ಅರಣ್ಯ ಮಾರ್ಗವಾಗಿ ಸಂಬಂಧಿಕರ ಮನೆಗೆ ಹೋಗುತ್ತಿದ್ದ. ಮನುಷ್ಯನನ್ನು ಕಂಡೊಡನೆ ಭಯಾನಕ ದೆವ್ವವು, ಬ್ರಾಹ್ಮಣನನ್ನು ಪೀಡಿಸಲು ಮುಂದಾಯಿತು. ಭೂತದ ಕಥೆಯನ್ನು ಕೇಳಿದ್ದ ಬ್ರಾಹ್ಮಣನಿಗೆ, ದೆವ್ವದ ಭಯಂಕರ ಮುಖ ನೋಡಿ ಒಂದು ಕ್ಷಣ ಭಯವಾಯಿತು.
ಬ್ರಾಹ್ಮಣನಿಗೆ ತಪಃಪ್ರಭಾವದಿಂದ ಶರೀರವನ್ನು ತ್ಯಜಿಸಿ ಅದೃಶ್ಯನಾಗುವ ಶಕ್ತಿ ಸಿದ್ಧಿಸಿತ್ತು. ಅದರ ಪ್ರಯೋಗದಿಂದ ಬ್ರಾಹ್ಮಣ ಸ್ವಶರೀರ ತ್ಯಜಿಸಿ ವಟವೃಕ್ಷದಲ್ಲಿ ಅದೃಶ್ಯನಾಗಿ, ಬೆಳಿಗ್ಗೆ ಭೂತವು ಕಾಣಿಸದ ವೇಳೆಯಲ್ಲಿ, ತನ್ನ ಶರೀರದಲ್ಲಿ ಮರುಪ್ರವೇಶಿಸಿ ಸಂಬಂಧಿಕರ ಮನೆ ಸೇರಿದ.