ಓಂಕಾರ್ ಪ್ರಭುಗೆ ಸರಸ್ವತಿ ಪುರಸ್ಕಾರ
ಓಂಕಾರ್ ಪ್ರಭುಗೆ ಸರಸ್ವತಿ ಪುರಸ್ಕಾರ
ಮೂಲ್ಕಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠದ ವಿದ್ಯಾರ್ಥಿ ಎ. ಓಂಕಾರ್ ಜಿ ಪ್ರಭು ಅವರು ಈ ಬಾರಿಯ ಹತ್ತನೇ ತರಗತಿ ಪರೀಕ್ಷೆಯಲ್ಲಿ 611 (ಶೇ 97.7) ಅ೦ಕಗಳನ್ನು ಪಡೆದು ದಾವಣಗೆರೆ ಸಾಲಿಗ್ರಾಮದ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ನೀಡುವ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಓಂಕಾರ್ ಪ್ರಭು ರವರು ಶೈಕ್ಷಣಿಕ ಸಾಧನೆಯೊಂದಿ ಗೆ ಇತರ ಚಟುವಟಿಕೆಗಳಲ್ಲೂ ಮುಂದಿದ್ದು ಮಂಗಳೂರು ಟಾಲೆಂಟ್ ಸರ್ಚ್ ಸ್ವರ್ಧೆ ಯಲ್ಲಿ ತೃತೀಯ ಸ್ಥಾನ, ಜಿಲ್ಲಾ ಮಟ್ಟದ ವಿಜ್ಞಾನ ಮಾದರಿ ರಚನಾ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಅನೇಕ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸ್ವರ್ಧೆಗಳಲ್ಲಿ ತನ್ನ ಶಾಲೆಯನ್ನು ಪ್ರತಿನಿಧಿಸಿ ಬಹುಮಾನಗಳನ್ನು ಪಡೆದಿರುತ್ತಾರೆ.
ಕನ್ನಡ ರಾಜ್ಯೋತ್ಸವದಂದು ದಾವಣಗೆರೆಯ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪುರಸ್ಕಾರವನ್ನು ಸ್ವೀಕರಿಸಲಿರುವ ಇವರು ಧರ್ಮಸ್ಥಳದ ಶ್ರೀ ಆನೆಕಲ್ಲು ಗೋಪಾಲಕೃಷ್ಣ ಪ್ರಭು ಮತ್ತು ಆರತಿ ಜಿ ಪ್ರಭು ದಂಪತಿಗಳ ಪುತ್ರರಾಗಿರುತ್ತಾರೆ.