STORYMIRROR

Dr. Gopika, M.H

Inspirational

2  

Dr. Gopika, M.H

Inspirational

ಶ್ರಮ ಜೀವಿ ರೈತ

ಶ್ರಮ ಜೀವಿ ರೈತ

1 min
292

ಬಿಡಿಗಾಸು ಕೈಲಿಲ್ಲಾ

ಬಿತ್ತುವುದ ಬಿಡಲಿಲ್ಲ

ಇಳೆಯಲ್ಲಿ ಮಳೆ ಇಲ್ಲ

ಒಣಗೋಯ್ತು ಬೆಳೆಯೆಲ್ಲಾ


ಮರುವರ್ಷ ಬೆಳೆದಾಗ

ತೆನೆ ತುಂಬಿ ನಗುವಾಗ

ಮಳೆ ಸುರಿದು ನಿಲ್ಲಲಿಲ್ಲ

ಕೊಚ್ಚೊಯ್ತು ಬೆಳೆಯೆಲ್ಲಾ


ಹೊಸ ವರಷ ಬಂದಾಗ

ಹೊಸ ಕನಸ ಕಂಡಾಗ

ಕರೋನವು ಬಂತಲ್ಲ

ಜನ ಹೊರಗೆ ಸುಳಿವಿಲ್ಲ


ಹೊಲದಲ್ಲಿ ಆಳಿಲ್ಲ

ಚಲ್ಲೋಯ್ತು ಕಾಳೆಲ್ಲ

ಕೊಳ್ಳೋರೆ ಗತಿಯಿಲ್ಲ

ಕೊಳೆತೋಯ್ತು ಬೆಳೆಯೆಲ್ಲಾ


ಬೆಳೆಗೆಂದೂ ಬೆಲೆಯಿಲ್ಲ

ಸಾಲವೇ ಬದುಕೆಲ್ಲ 

ಅದಕವನು ಅಂಜಲ್ಲ

ಛಲವನ್ನು ಬಿಡನಲ್ಲ


ಶ್ರಮತೆಯನು ಮರೆತಿಲ್ಲ

ಘನತೆಯನು ಕೇಳಲ್ಲ

ಜಡತೆಯ ಸುಳಿವಿಲ್ಲ

ಪರಿಶ್ರಮವೇ ಬದುಕೆಲ್ಲ



Rate this content
Log in

Similar kannada poem from Inspirational