ಶಕುನಿ
ಶಕುನಿ
ಶಕುನಿಯು
ರೋಷಕ್ಕಾಗಿ ದಶಕಗಳ ಕಾಲ
ರಣ ಹದ್ದಿನಂತೆ ಕಾಯ್ದು,
ತನ್ನ ಗಾಂಧಾರ ಸಹೋದರರ ಪಾಲಿನ
ಒಂದೊಂದು ಅಗುಳು ಅನ್ನವಾ ಉಂಡು,
ಸಹೋದರರು ಮಲ ಮೂತ್ರಗಳಲಿ
ಬಿದ್ದು ಒದ್ದಾಡಿ ಸಾಯುವುದ ಕಂಡು,
ಕುರು ವಂಶದ ನಾಶಕ್ಕಾಗಿ
ಶಪಥ ಮಾಡಿ,
ಸಹೋದರರ ಮೂಳೆಗಳಿಂದ
ದಾಳಗಳನ್ನು ಮಾಡಿ,
ಶ್ರೀಕೃಷ್ಣನ ಪರಮ ಭಕ್ತನಾದ
ಶಕುನಿಯು ಸುಯೋಧನನ
ಪಕ್ಷವನ್ನೇ ಸೇರಿ,
ಚತುರತೆಯಿಂದ ಎಲ್ಲಾ ತಂತ್ರಗಳನ್ನು
ಸಾಂಗೋಪಾಂಗವಾಗಿ ಮುಗಿಸಿ
ಸುಯೋಧನನನ್ನೇ ನಾಶ ಮಾಡಿ,
ಧರ್ಮ ಸ್ಥಾಪನೆಗೆ ಸಹಕಾರಿಯಾದ.