STORYMIRROR

Harish T H

Drama Inspirational

4  

Harish T H

Drama Inspirational

ವಾಯುಪುತ್ರರು

ವಾಯುಪುತ್ರರು

1 min
46

ರಾಮಾಯಣದ ಪ್ರಮುಖ ಸ್ಥೂಲದಾರನು, ಶಿವನ ಅಂಶವುಳ್ಳ 

ವಾಯು ಪುತ್ರನು ನಮ್ಮ ಹನುಮಂತನು.

ಅಂಜನ ಸುತನು, ರಾಮನ ಬಂಟನು, ನಿಜಗುಣ ಸೋಮನಾದ

ವೀರಾದಿ ಧೀರನು ನಮ್ಮ ಆಂಜನೇಯನು.


ಮಹಾಭಾರತದ ಪ್ರಮುಖ ಸ್ಥೂಲದಾರನು, ವಜ್ರ ದೇಹ ಸಹನಾಭೂತಿಯುಳ್ಳ

ವಾಯು ಪುತ್ರನು ನಮ್ಮ ವೃಕೋಧರನು.

ಕುಂತಿಯ ಸುತನು, ಹನುಮನ ಅನುಜನು, ಗದಾಯುದ್ಧ ಪ್ರವೀಣನಾದ

ನೂರಾನೆಯ ಬಲದವನು ನಮ್ಮ ಭೀಮಸೇನನು.


ಹೀಗೊಂದು ದಿನವು ಮಹಾಭಾರತದ ಕಾಲದಲ್ಲಿ ಬಲ ಭೀಮನಿಗೆ ಅವನ

ಭುಜ ಬಲದ ಮೇಲೆ ಗರ್ವ ಉಂಟಾಗುವುದು.

ಅಗ್ರಜನಾದ ಹನುಮಂತನು ತನ್ನ ಬಾಲವನ್ನು ಮೇಲಕ್ಕೆತ್ತೆಂದಾಗ 

ಭೀಮನಿಗೆ ಅದಾಗದೆ ಶರಣಾಗಿ ತನ್ನ ತಪ್ಪು ಅರಿವಾಗುವುದು.


ನಂತರ ವಾಯುಪುತ್ರರಿಬ್ಬರೂ ತಬ್ಬಿಕೊಳ್ಳುವರು.

    


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Drama