STORYMIRROR

J.AY Addoor

Inspirational Thriller Children

4  

J.AY Addoor

Inspirational Thriller Children

ನನ್ನ ಭಾರತ!!!

ನನ್ನ ಭಾರತ!!!

1 min
317

ನನ್ನ ಭಾರತ!!!

ಕತ್ತಲಿನ ಬಾನೊಳಗೆ ಚಂದ್ರ ಹೊಳೆದಂತಿದೆ 

ಬುವಿಯೋಳು ಭಾರತ 

ಮರುಭೂಮಿ ನಡುವೋಲು

ಆಲದ ಮರದಂತಿದೆ 

ಬಾಳೆಡೆಗೆ ಭಾರತ…. 


ರಕ್ತ ಬೆವರು ಸುರಿಸಿ ಅಂದು 

ಜಾತಿ ಧರ್ಮ ನೋಡದೆಂದು 

ಭೇದಭಾವ ಬೇಡವೆಂದು 

ಒಂದೇ ಬಟ್ಟಲಲ್ಲಿ ಉಂಡು 

ಈ ನೆಲವ ಶಾಂತಿಯತ್ತ ತಂದದುಂಟು


ಟಿಪ್ಪು ಹೈದರ್ ಹುಲಿಗಳೆರಡು 

ಎದೆ ತಟ್ಟಿ ಎದುರಿಸಿದ್ರು 

ಗಾಂಧಿ,ನೆಹರು,ಬಾಬ ಸಾಹಬ್ 

ಮಾತು ಮುತ್ತೆಂಬ ಬಾನ 

ಎರೆಚಿದ್ರು….


ಪಂಜರದ ಪಕ್ಷಿಯಂತೆ 

ಬಿಳಿಯರೊಳಿತ್ತು ಭಾರತ 

ಪಂಜರದ ಕಡಿಯಲೆಂದೇ

ಉಲ್ಭವಿಸಿತು ಪಡೆ 

ಧೀರ ನೇತಾಜಿಯಾ….


ಹಗಲಿರುಳು ಕಷ್ಟಪಟ್ಟು 

ಹಣ ಜೀವನ ನಷ್ಟಪಟ್ಟು 

ಮಧ್ಯೆರುಳು ಸಿಕ್ತು 

ಬ್ಯಾಟನ್ ಕೈಯ ಕೀಲಿಕೈ

ಹೂವೆಂಬ ದೇಶವಂದು ಪುನಃವರಳಿತು 

ಕ್ರಿಮಿಗಳಿಲ್ಲದ ಬಿಳಿಯರಿಂದ 


Rate this content
Log in

Similar kannada poem from Inspirational