ಕೃಷ್ಣಾರ್ಜುನರ ಸಂಭಾಷಣೆ
ಕೃಷ್ಣಾರ್ಜುನರ ಸಂಭಾಷಣೆ
ನೀ ಹೇಳೋ ಮಾಧವ.
ನೀ ಹೇಳೋ ಮಾಧವ.
ಯಾಕೀ ಕ್ರೂರ ಕೃತ್ಯವು?
ಯಾಕೀ ಘೋರ ಅಂತ್ಯವು?
ನನಗಾಗದು ಯುದ್ಧ ಮಾಡಲು.
ಜೊತೆಗಾರರ ಮಟ್ಟ ಹಾಕಲು.
ನೀ ಕೇಳೋ ಮಾನವ.
ನೀ ಕೇಳೋ ಮಾನವ.
ಜಗದ ಪಾಲನೆಗೆ ಅನಿವಾರ್ಯ ಈ ಕೃತ್ಯವು.
ಆಗಲಿದೆ ಧರ್ಮದಿಂದ ಅಧರ್ಮದ ಅಂತ್ಯವು.
ನಿನ್ನ ತಪ್ಪೇನಿಲ್ಲ, ನಡೆ ಧರ್ಮದ ಯುದ್ಧಕ್ಕೆ ನೀ ಹೂಡು ಬಾಣವ.
ಎಲ್ಲವೂ ನನ್ನಿಂದಲೇ, ನೀ ಕ್ಷತ್ರಿಯನು ಮರೆಯದಿರು ನಿನ್ನ ಕಾಯಕವ.