ಒಂದಾಗುವ
ಒಂದಾಗುವ
ಒಂದಾಗುವ
ಶಾಂತಿ ಬೆಳೆಸಿದ ಗಾಂಧಿಯ
ಕೊಲೆಯಾಯಿತು
ಚಿಗುರೊಡೆಯೊ ಶಾಂತಿಯು
ತಿವಿಏಟಿಗೆ ಬಲಿಯಾಗ್ತಿದೆ
ರೊಕ್ಕದ ಸೊಕ್ಕಿದ್ರೆ
ಕಣ್ಣೆದುರೋರೆ ಕೈಗೊಂಬೆ
ಬಡ ಕಾರ್ಮಿಕರ ಗೋಲರಿಯೂ
ನಾಯಕರೇ ಇರೂದೆಂಗೆ
ಗಾಂಧಿ ಮಾತಿಗೂ ಬೀಗ ಜಡಿದ್ರು
ಗೌರಿ ಪದಕ್ಕು ಕೊನೆ ಬಿತ್ತು
ನೀಚ ದುಡ್ಡಿಗೆ ಮುಗಿ ಬಿದ್ದು
ಹೆತ್ತಾಯಿಯನ್ನೇ ಗೋಡೆಚಿತ್ರವಾಗಿಸಿದ್ರು
ದುಡ್ಡಿನ ಹೆಡ್ಡತನ ಬಿಟ್ಟು
ಸಾರ್ಥ ಜೀವನದಾಸೆ ಬಿಟ್ಟು
ಧರ್ಮದೆಡೆಯ ಹಿಂಸೆ ಸುಟ್ಟು
ಶಾಂತಿ ಬೀಜವ ಪುನಃ ಬಿತ್ತುವ
ಅನ್ಯಾಯದೆದ್ರು ಪದ ಬರೆದೊರು
ಸೆಲ್ಲೊಳಗೆಯ
ಹಿಂಸೆ ಎದುರು ಮಾತೆತ್ತವರು
ಮಣ್ಣಡಿಗೇನಾ
ಹೊಡೆದಾಳೊ ಬಿಳಿಯರಿನ್ನು
ಹೊರಟಿಲ್ವಾ
ಒಂದಾಗೊ ಗಳಿಗೆ ಬಂದಿದೆ
ಥರ್ಮದೆಡೆಯ ಧ್ವೇಷ ತೊರೆದು
ಪುನಃ ಕಟ್ಟುವ
ಏಕತೆಯ ಭವ್ಯ ಭಾರತ.....,
