ನೀಲಿಬಣ್ಣ
ನೀಲಿಬಣ್ಣ
ವಸುದೇವನ ಸುತ
ಉಡುಪಿಯ ಒಡೆಯ
ನೀಲ ಮೇಘ ಶ್ಯಾಮ
ನಮ್ಮ ಕಾಯುತಿರುವನು॥
ಆಗಸದ ನೀಲಿಯಲಿ
ಹಗಲ ಹೂವದು ಅರಳಿ
ನಿತ್ಯ ಬೆಳಕ ನೀಡುವುದು|
ರಾತ್ರಿಯಾಗಸದಿ ಬೆಳ್ಳಿ ಚುಕ್ಕೆ
ಚಿತ್ತಾರ ಬಿಡಿಸಿಹುದು|
ಸಾಗರದ ನೀಲಿಯಲಿ
ಮೀನುಗಳ ಹೆಜ್ಜೆಯ
ಗುರುತಿಸಲು ಕಷ್ಟವಹುದು|
ಚಲನೆ, ನಿರಂತರತೆಯ
ಸಂಕೇತವಾಗಿಹ ಚಕ್ರ
ನಮ್ಮ ಧ್ವಜದಲಿಹುದು|
ಮನದ ಗೊಂದಲ ನೀಗಿ
ಶಾಂತತೆಯ ನೆಲೆಗೊಳಿಸಿ
ಸಮತೆಯನು ಕಾಯ್ವ ಬಣ್ಣ ॥
