ಮಾಯ
ಮಾಯ
ಜ್ಞಾನಿಯಾಗಿ ಹುಚ್ಚನಾದೆ,
ಉಸಿರಾಗಿ ಚಟ್ಟವಾದೆ,
ಹಸಿವು ಬಾಯಾರಿಕೆಯಾಗಿ ನೋವು ಸಂಕಟವಾದೆ,
ಹೂವಾಗಿ ಹೊಲಸಾದೆ,
ಶಾಸನವಾಗಿ ಸುಳ್ಳಾದೆ,
ಶಂಕರರ ಹಾಡುಗಳ ಭಕ್ತಿಯಿಂದ ನಂಬಿ,
ನಿನ್ನಿಚ್ಚೆ ಎಂದು ನೆಡೆದರೂ,
ಅರಿತು ಅರಿಯದೆ ತಪ್ಪುಗಳಮಾಡಿ,
ಆ ದೋಷಗಳ ಕೆಂಗಣ್ಣ ಬಿಸಿಯನ್ನು ಉಣ್ಣುತ್ತಾ,
ಇಲ್ಲಿರಲೂ ಆಗದೆ ತೊಲಗಲೂ ಆಗದೆ,
ಪ್ರೇತಾತ್ಮದಂತಿರಲು,
ಕಿರುಬೆರಳ ತುದಿಯನ್ನು ಹಿಡಿದು ನಡೆಸಯ್ಯ ದೈವ,
ಮಾಯಾಜಾಳದ ಮಾಯಾಲೀಲೆಯ ಮಾಯವಿಯೇ!