STORYMIRROR

Lakshmi Kanth L V

Drama Inspirational Others

4  

Lakshmi Kanth L V

Drama Inspirational Others

ಗಜಲ್

ಗಜಲ್

1 min
344

ಇರುವುದಾದರೆ ಮೌನವಾಗಿದ್ದುಬಿಡು ಅಹಂನ ಕೋಟೆಯೊಳಗೆ ಸಿಲುಕಬೇಡ

ನೆಮ್ಮದಿ ಸಿಗುವುದೆಂದು ಅಲ್ಲೆಲ್ಲೋ ಮಸಣದ ಗೋರಿಯೊಳಗೆ ಇಣುಕಬೇಡ


ಇಲ್ಲಂತೂ ಇಂಚು ನೋವಿಗೂ ಈಗೀಗ ಸುಂಕ ಕೊಡಲೇಬೇಕು ಮರೆಯದಿರು

ಕಷ್ಟಗಳು ಕರಗುತ್ತವೆ ಕತ್ತಲು ಮುಗಿದು ಹಗಲು ಬರುವುದರೊಳಗೆ ಮರೆಯಬೇಡ


ಬಯಲ ಜಾತ್ರೆಯ ತುಂಬಾ ಸುಖದ ಇನಾಮಿಗಾಗಿ ಹುಡುಕಾಡುವವರೇ ಹೆಚ್ಚು

ಸತ್ತರೂ ಹೆಗಲು ನೀಡುವ ಜನರಿಲ್ಲ ಜಗದೊಳಗೆ ಸಾವಿನ ಸೆಲೆಯೊಳಗೆ ಹೋಗಬೇಡ


ಬಾಡಿದ ಮನಸ್ಸಿನಲ್ಲಿ ನಗುವಿನ ಹೂವೆಂದೂ ಅರಳುವುದಿಲ್ಲ ಗೆಳೆಯ

ಮೌನದಲ್ಲೂ ಕೆತ್ತಿದ ಮಾತುಗಳ ಹೆಸರಿದೆ ಸುಮ್ಮನೆ ಮನಸ್ಸಿನೊಳಗೆ ಕೊರಗಬೇಡ


ಇಳಿಸಂಜೆಯಲ್ಲಿ ಜಾರಿದ ಕನಸಿಗೇನು ಗೊತ್ತು ‘ಲಕ್ಷ್ಮೀಶ’ ಬದುಕಿನ ಮರ್ಮ

ಸುಡುವ ಸೂರ್ಯನಿರುವಾಗ ಕಾರ್ಮೋಡದ ಭಯದೊಳಗೆ ಸುಖ ಬಯಸಬೇಡ


Rate this content
Log in

Similar kannada poem from Drama