STORYMIRROR

Masthi Babu M

Classics Inspirational Others

4  

Masthi Babu M

Classics Inspirational Others

ಭರವಸೆ

ಭರವಸೆ

1 min
288


ಬರಿದಾದ ಮನದಲ್ಲಿ

ಆಸೆಗಳು ಮೂಡಲೇಬೇಕು

ಬಡವ ಶ್ರೀಮಂತನಾಗುವ

ಶ್ರೀಮಂತ ಬಡವನಾಗುವ ಕಾಲವು ಬಂದೆ ಬರುವುದು

ಇದಕೆ ಸಾಕ್ಷಿಯಾಗಿ ನಿಂತಿಹುದು 

ಇಲ್ಲಿರುವ ವೃಕ್ಷವು


ಮರವು ಮೈದುಂಬಿ ಬೆಳೆದು

ಚಿಗುರಿ ಎಲೆಗಳನ್ನೊತ್ತು ನಿಂತಿತ್ತು ಆನಂದದಿ. 

ಆದರೆ ಇಂದು!!!!

ಉದುರಿ ಹೋದವು ಎಲ್ಲಾ ಎಲೆಗಳು. 

ಮರವು ಚಿಂತಿಸದು ನನ್ನ ಜೀವವು ಇಷ್ಟೇ ಎಂದು!!!

ಭರವಸೆ ಇಹುದು ಮರಕೆ

ಮತ್ತೆ ಹಸಿರೆಲೆಗಳು ಮೂಡುವುದೆಂದು!!!!

ಎಲ್ಲವೂ ಕ್ಷಣಿಕವೆಂಬ 

ಭಾವನೆಯು ಮರುಕಳಿಸುತಿಹುದು.


ಅರೆ, ದಿನಗಳುರುಳಿದಂತೆ ಮತ್ತೆ

ಚಿಗುರಿತು ಎಲೆಗಳು

ಹೂವು ಮೈದುಂಬಿ ನಿಂತಿತು 

ಮರದಲಿ

ಮರವು ಸಂತಸಗೊಂಡಿತು.

ಜೀವನದಿ ನಿರಾಸೆಯ ಕಂಡ ಮನುಜನಿಗೆ ಭರವಸೆ ತುಂಬಿತು ಮರವು.


ಮನುಜರೆಲ್ಲರೂ ಕೇಳಿರಿಲ್ಲಿ

ಇಂದಲ್ಲಾ ನಾಳೆ ಎಲ್ಲರ ಬಾಳಲ್ಲೂ ಬರುವುದು ಶುಭದಿನವು.

ಏನೇ ಆಗಲಿ ಸಾವಧಾನದಿ‌ ಸಾಗುತಲಿರಿ~ ಸಾಗುತಲಿರಿ ನನ್ನಂತೆ

ಕತ್ತಲು ತುಂಬಿದ ಮನಕೆ 

ಬೆಳಕು ಕಾಣುವುದು ಎಂಬ ಸತ್ಯವ ತಿಳಿಸಿತು ಈ ವೃಕ್ಷವು

 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics