STORYMIRROR

Gireesh pm Giree

Others Children

2  

Gireesh pm Giree

Others Children

ಕನ್ನಡ ರತ್ನ

ಕನ್ನಡ ರತ್ನ

1 min
121

ವಿಶ್ವೇಶ್ವರಯ್ಯರ ಜನುಮದಿನದ ಸಡಗರ

ನಿಮ್ಮ ಹೆಗ್ಗುರುತಿಗೆ ಸಾಕ್ಷಿ ಕೃಷ್ಣರಾಜಸಾಗರ

ದಿವಾನರಾಗಿದ್ದಾಗ ಆಯ್ತು ಕರುನಾಡು ಶೃಂಗಾರ

ಮೂಡಿತು ಬಯಲ ತುಂಬಾ ಹಸಿರ ಮಡಿಲ ಮಂದಿರ


ಕನ್ನಡನಾಡಿನ ಕೀರ್ತಿಪತಾಕೆ ಹಾರಿಸಿದ ಹೆಗ್ಗಳಿಕೆ

ಹೊಸ ಹೊಸ ತಂತ್ರಜ್ಞಾನಕ್ಕೆ ಸಾಕ್ಷಿ ನಿಮ್ಮ ಬತ್ತಳಿಕೆ

ಕನ್ನಡಿಗರು ಮರೆಯುವಂತಿಲ್ಲ ನಿಮ್ಮ ಸಾಧನೆ

ನಾವು ಮರೆಯುವಂತಿಲ್ಲ ನೀವು ಕೈಗೊಂಡ ಯೋಜನೆ


ಭಾರತ ರತ್ನ ಪಡೆದ ಹೆಮ್ಮೆಯ ಕನ್ನಡಿಗ

ಶತಮಾನ ಕನ್ನಡ ನಾಡ ಕಂಡ ಹಿರಿಮಗ

ಹಚ್ಚಿರುವಿರಿ ಈ ನಾಡಲ್ಲಿ ಹೊಸತನದ ದೀಪ

ಅದು ಇಂದಿಗೂ ಬೆಳಗುತ್ತಿದೆ ಆ ನಂದಾದೀಪ


Rate this content
Log in