ಕಾಮನ ಹಬ್ಬ( ಹೋಳಿ ಹಬ್ಬ)
ಕಾಮನ ಹಬ್ಬ( ಹೋಳಿ ಹಬ್ಬ)
ಕಾಮನ ಹಬ್ಬದ ಪುರಾಣ
ಕಥೆಯ ಕೇಳಿರಿ ಎಲ್ಲಾ
ಹೋಳಿ ಹಬ್ಬದ ಹಿಂದಿನ
ತ್ಯಾಗದ ಕಥೆಯ ಕೇಳಿರಿ ಎಲ್ಲಾ
#Rang barse ಹೋಳಿ ಹಬ್ಬದ
ಪೌರಾಣಿಕ ಕಥೆಯ ತಿಳಿಯಿರಿ ಎಲ್ಲಾ
#Rang barse ಬಣ್ಣದ ಹಬ್ಬದ ಹಿಂದಿನ
ತಾರಾಕಾಸುರನೆಂಬ ಕ್ರೂರಿ ರಕ್ಕಸನು
ಬ್ರಹ್ಮನ ವರಬಲದಿಂದ ಸೊಕ್ಕಿ
ಲೋಕದೊಳಗೆ ಮೆಮೆರೆಯತೊಡಗಿದನು
ಶಿವನ ತನಯನದ ಮಾತ್ರ ತನ್ನಯ
ವಧೆಯಾಗಲಿ ಎಂದು ವರ ಪಡೆದಿದ್ದ ರಕ್ಕಸನು
ಈ ಅಸುರನ ಉಪಟಳ ತಾಳಲಾರದೆ
ಸುರರೆಲ್ಲ ಇವನ ಸಂಹಾರಕ್ಕೆ ಉಪಾಯ ಮಾಡಿದರು
ಮನಸಿಜ ಕಾಮದೇವನ ಮೊರೆ ಹೋದರು
ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದರು
ಲೋಕದ ಕಲ್ಯಾಣಕ್ಕಾಗಿ,ಅಸುರನ ನಾಶಕ್ಕಾಗಿ
ಶಿವನು ಸತಿ ಶಿವೆಯೊಡನೆ ತಪಸ್ಸು ಮಾಡುತ್ತಿದ್ದಾಗ
ಮನ್ಮಥನು ಹೂಬಾಣದಿಂದ ಶಂಕರನ ಬಡಿದೆಬ್ಬಿಸಿದನು
ತಪೋಭಂಗವಾಗಿ ಕೋಪಗೊಂಡ ಬೊಲೇನಾಥನು
ಮೂರನೆ ಕಣ್ಣನು ಬಿಟ್ಟು ರತೀಶನ ಭಸ್ಮ ಮಾಡಿದನು
ಕಾಮನ ಪ್ರಿಯ ಸತಿ ರತಿ ದೇವಿಯು ಪತಿಯ
ಭಿಕ್ಷೆಯನು ಕೇಳುತ್ತಾ ಕಣ್ಣೀರಿಡುತ್ತಾ ಬೇಡಿದಳು
ಅಂಗಜನು ನಿನ್ನ ಕಣ್ಣಿಗೆ ಮಾತ್ರ ಸಶರೀರಿಯಾಗಿ
ಕಾಣುವನು ಎಂಬ ವರವನು ಆಕೆಗೆ ಹರನು ನೀಡಿದನು.
ಜಗತ್ತಿನ ಹಿತಕ್ಕಾಗಿ ಕಂದರ್ಪನು ಅನಂಗನಾದ ದಿನವನ್ನು
ಕಾಮನ ಹುಣ್ಣಿಮೆ ಹೋಳಿ ಹಬ್ಬವಾಗಿ ಆಚರಿಸುವರು.
#Rang barse ಹೋಳಿ ಹಬ್ಬದ ಪುರಾಣ
ಕಥೆಯ ಕೇಳಿರಿ ಎಲ್ಲಾ
#Rang barse ಹೋಳಿ ಹಬ್ಬದ ಹಿಂದಿನ
ಭಕ್ತ ಪ್ರಹ್ಲಾದನ ಕತೆಯ ಅರಿಯಿರಿ ಎಲ್ಲಾ
ತಾನೇ ದೇವರು ತಾನೇ ಜಗದ
ರಕ್ಷಕ ಎಂಬ ಭ್ರಮೆಯಲ್ಲಿದ್ದ ಒಬ್ಬ
ದೈತ್ಯರಾಜ ಹಿರಣ್ಯ ಕಶಿಪು ಎಂಬುವನು
ಇವನ ಸುತ ಪ್ರಹ್ಲಾದನು ಶ್ರೀ ಹರಿಯೇ
ಜಗನ್ನಿಯಾಮಕ ಎಂದನು ಹಾಡಿ ಹೊಗಳಿದನು
ಅದನು ನೋಡಿ ಸಹಿಸದ ಹಿರಣ್ಯ ಕಶಿಪು
ಹೆತ್ತ ಮಗನನ್ನೇ ಕೊಲ್ಲಲು ಸಂಚು ಹೂಡಿದನು
ಕೊಲ್ಲಲು ವಿಧ ವಿಧ ಪ್ರಯತ್ನಗಳನ್ನು ಮಾಡಿದನು
ಕೊನೆಗೆ ಸೋತು ತನ್ನ ತಂಗಿ ಹೋಳಿಕಾಳ
ಅಗ್ನಿಯ ರಕ್ಷಣೆಯ ವರಬಲದಿಂದ ಸಹಾಯ ಪಡೆದನು
ಅಣ್ಣನ ಆಜ್ಞೆಯ ಮೀರದ ತಂಗಿ ಒಪ್ಪಿದಳು
ಬಾಲ ಪ್ರಹ್ಲಾದನನ್ನು ಹೊತ್ತುಕೊಂಡಳು
ಅಗ್ನಿಕುಂಡದಲ್ಲಿ ಹೋಗಿ ಬಾಲಕನೊಂದಿಗೆ ಕುಳಿತಳು
ಆಗ ಭಕ್ತ ಪ್ರಹ್ಲಾದ ಹರಿಯ ಜಪ ಮಾಡಿದನು
ಹೋಳಿಕಾ ಬೆಂಕಿಯಲ್ಲಿ ದಹನವಾದಳು
ಭಕ್ತ ಪ್ರಹ್ಲಾದನು ಹರನ ಕೃಪೆಯಿಂದ
ಪವಾಡ ಸದೃಶ ರೀತಿಯಲ್ಲಿ ಪಾರಾದನು
ಹೋಳಿಕಾಳ ದಹನವಾದ ದಿನವನ್ನು
ಹೋಳಿ ಹಬ್ಬವನಾಗಿ ಆಚರಿಸಲಾಯಿತು
ಹೋಳಿ ಹಬ್ಬದ ಎರಡು ಪೌರಾಣಿಕ ಕತೆಗಳ
ಸಂದೇಶವು ಒಂದೇ ಅರಿಷಡ್ವರ್ಗಗಳನ್ನು ಸುಡುವುದು
ಅಸುರೀ ದುಷ್ಟ ಶಕ್ತಿಗಳ ನಿರ್ನಾಮದ ದ್ಯೋತಕವು
ಇಂಥಹ ಅಮೂಲ್ಯ ಸಂದೇಶಗಳ ಸಾರುವ
ಕೆಡುಕಿಗೆ ಯಾವತ್ತು ಜಯವಿಲ್ಲ ಎಂಬ ಪಾಠವ
ಸರ್ವರಿಗೂ ತಿಳಿಸುವ ಹಬ್ಬವು ಹೋಳಿಯ ಹಬ್ಬ#Rang barse