Vaman Acharya

Children Stories Classics Inspirational

3  

Vaman Acharya

Children Stories Classics Inspirational

ರೈಲು ನಿಲ್ದಾಣದಲ್ಲಿ ಪುಟ್ಟ ಹುಡುಗ

ರೈಲು ನಿಲ್ದಾಣದಲ್ಲಿ ಪುಟ್ಟ ಹುಡುಗ

6 mins
188


    


ಪವನಪೂರ ಒಂದು ಚಿಕ್ಕ ರೈಲು ನಿಲ್ದಾಣ. ಹೋಗುವ ಬರುವ  ರೈಲುಗಳು ಬಹಳ ಇದ್ದರೂ ನಿಲುಗಡೆ ಆಗುವದು ಕೇವಲ ಎರಡು ರೈಲುಗಳು ಮಾತ್ರ. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಹತ್ತು ವರ್ಷದ ಪುಟ್ಟ ಬಾಲಕ ಹೇಮಂತ ರೈಲು ನಿಲ್ದಾಣದಲ್ಲಿ ಬಹಳಷ್ಟು ಸಮಯ ಕಳೆಯುವನು. 

ಅವನು ಅಲ್ಲಿ ಏನು ಮಾಡುವನು?

 ಅಂದು ಭಾನುವಾರ ಹೇಮಂತ ಮನೆಯಿಂದ ಬೆಳಗಿನ ಏಳು ಗಂಟೆಗೆ ಸ್ಟೇಷನ್ ಗೆ ಬಂದು ರೈಲುಗಳು ಓಡಾಡುವದನ್ನು ನೋಡುವನು. ಸ್ಟೇಶನ್ ಹೊರಗಡೆ ಇರುವ ಕ್ವಾರ್ಟರ್ಸ ಅವನ ಮನೆ. ಆ ಹುಡುಗ ಪವನಪುರ ಸ್ಟೇಶನ್ ಮಾಸ್ತರ ಸೇತುರಾಮ್ ಹಾಗೂ ರುಕ್ಮಿಣಿ ಅವರ ಏಕೈಕ ಪುತ್ರ. ತಾಯಿಗೆ ಆಟ ಆಡಿ ಬರುವದಾಗಿ ಸುಳ್ಳು ಹೇಳುತ್ತಿದ್ದ. ಆಕೆಗೆ ಗೊತ್ತು ಅವನು ಹೋಗುವ ಸ್ಥಳ. 

ಹೇಮಂತ  ಪ್ಲಾಟ್ ಫಾರ್ಮ್ ನ ಕೊನೆಗೆ ಇರುವ ಮರದ ಕೆಳಗೆ ಬೆಂಚ್ ಮೇಲೆ ಕುಳಿತು ಎಲ್ಲ ಕಡೆ ನೋಡುವದರ ಜೊತೆಗೆ ಕ್ಲಾಸ್ ಪುಸ್ತಕ ಓದುತ್ತಿದ್ದ. ರೈಲು ಹೋದ ಮೇಲೆ ನಿಲ್ದಾಣದಲ್ಲಿ ನಿ:ಶಬ್ದ. ಆ ಸಮಯದಲ್ಲಿ ಪುಸ್ತಕ ಓದುವನು. ಮನೆ ಬಿಟ್ಟು ಮೊದಲು ಸ್ಟೇಶನ್ ಪಕ್ಕದಲ್ಲಿ ಇರುವ ಮಾರುತಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನನ ಆದಮೇಲೆ ನಿಲ್ದಾಣಕ್ಕೆ ಬರುವನು. 

 ಆ ಸಮಯದಲ್ಲಿ ಒಂದು ರೈಲು ಆಗಮನ ವಾಗುವದು.  ಅದು ಬರುವ ಶಬ್ದ ಜೋರಾಗಿ ಇದ್ದು ಸೇತುವೆ ಒಳಗಿನಿಂದ ಬರುವ ದೃಶ್ಯ ನೋಡಿದ ಅವನಿಗೆ ಎಲ್ಲಿಲ್ಲದ ಖುಷಿ. ನಂಬರ್ 7745 ಇರುವ ರೈಲು ಹಳದಿ ಹಾಗು ಕೆಂಪು ಬಣ್ಣದ ಬೋಗಿಗಳು ಇದ್ದು ಅದು ಮುಂಬೈ ಯಿಂದ ಚನ್ನೈ ಗೆ ಹೋಗುವದು. ಆ ರೈಲು ಪವನಪುರ ಸ್ಟೇಶನ್ನ ನಿಲುಗಡೆ ಇಲ್ಲ. ಹೇಮಂತ ಒಂದು ಕಡೆ ನಿಂತು ನಗುತ್ತ ಪ್ರಯಾಣಿಕರಿಗೆ 'ಹ್ಯಾಪಿ ಜರ್ನಿ' ಎಂಬ ದೊಡ್ಡ ಅಕ್ಷರಗಳ ಫಲಕ ತೋರಿಸುತ್ತಾ ಇರುವಾಗ ಪುಟ್ಟ ಹುಡುಗನನ್ನು ನೋಡಿದ ಪ್ರಯಾಣಿಕರು ಸಂತಸದಿಂದ ಕೈ ಮಾಡುವರು. ಕೆಲವು ಸಲ ಸಿಗ್ನಲ್ ಮ್ಯಾನ್ ಅಬ್ದುಲ್  ಹಿಡಿದ ಹಸಿರು ನಿಶಾನೆ ಕಸಿದು ಕೊಂಡು ತಾನು ತೋರಿಸುವನು. ಇವನ ಚಲನವಲನ ಗಮನಿಸಿದ ತಂದೆಗೆ ವಿಚಿತ್ರ ಅನಿಸಿದರೂ ಸುಮ್ಮನೆ ಇದ್ದರು. ಆದರೆ ತಾಯಿ ರುಕ್ಮಿಣಿಗೆ  ಇದು ಸರಿ ಬರುತ್ತಿರಲಿಲ್ಲ.  ಹೇಮಂತ ನಿಗೆ ರೈಲು ಗಳ ಓಡಾಟ ನೋಡುವದಕ್ಕೆ ಊಟ ತಿಂಡಿ ಮರೆತು ಬಿಡುವನು. ಅವನು ರೈಲುಗಳ ಆಗಮನ ನಿರ್ಗಮನದ ಸಮಯ ಪಟ ಪಟ ಹೇಳುವನು. ಯಾವ ಸಮಯಕ್ಕೆ ಎಲ್ಲಿ ಬಂದು ನಿಲ್ಲುವದು ಎನ್ನುವದು ಅವನಿಗೆ ಗೊತ್ತು.  

ಹೇಮಂತ ನಿಗೆ ಸೈಕಲ್ ಓಡಿಸುವದು ತುಂಬಾ ಇಷ್ಟ.  ಮಧ್ಯಾಹ್ನ ಹನ್ನೆರಡು ಘಂಟೆಯಿಂದ ಒಂದು ಗಂಟೆ ರೈಲು ಓಡಾಟ ಇರುವದಿಲ್ಲ. ಅಂದು ಈ ಸಮಯದಲ್ಲಿ ಅವನು ಮನೆಗೆ ಹೋಗಿ ಊಟ ಮಾಡಿ ಬಂದ. ಮನೆಯಿಂದ ಹೊರಗೆ ಬಂದರೆ ಅವನಿಗೆ ಬೇಕು ಸೈಕಲ್. ನಿಲ್ದಾಣಕ್ಕೆ ಬಂದು ಅದನ್ನು ಒಳಗೆ ಸೈಕಲ್ ನಿಲ್ಲಿಸಿ ತಿರುಗಾಡುವನು. ಅವನು ಮೊಬೈಲ್  ಇಟ್ಟು  ಕೊಂಡಿರುವದರಿಂದ ಫೋಟೋ ಗಳನ್ನು ತೆಗೆಯುವನು.  ಒಂದು ಚಿಕ್ಕ ನೋಟ ಬುಕ್ ನಲ್ಲಿ ಅವನು ರೈಲಿನ ಹೆಸರು, ಕೊನೆಯ ನಿಲ್ದಾಣಕ್ಕೆ ತೆಗೆದು ಕೊಳ್ಳುವ ಸಮಯ, ನಡುವೆ ಬರುವ ಮುಖ್ಯನಿಲ್ದಾಣಗಳ ಹೆಸರುಗಳು, ಒಟ್ಟು ಪ್ರಯಾಣಿಸುವ ಕಿಲೊಮೀಟರ್ ಹಾಗೂ ಫೇರ್ ಇವುಗಳ ಮಾಹಿತಿ ಬರೆಯುವನು. ಹೇಮಂತನಿಗೆ ಎಲ್ಲ ರೈಲುಗಳ ಅಂದರೆ ಮುಂಬೈ- ಚೆನ್ನೈ, ಮುಂಬೈ-ಅಹ್ಮದಾಬಾದ್, ಮುಂಬೈ- ಬೆಂಗಳೂರು ಇವುಗಳ  ಮಾಹಿತಿ, ನಂಬರ್  ಅವುಗಳ ಬಣ್ಣ, ಗೊತ್ತಿರುವದು.   

ಅಂದು ವೃದ್ಧ ದಂಪತಿ ಮುಂಬಯಿ ಕಡೆ ಹೋಗುವ ರೈಲು ಹತ್ತಲು ಹರಸಹಾಸ ಮಾಡ ಬೇಕಾಯಿತು. ಕಾರಣ ನಿಲುಗಡೆ ಸಮಯ ಕೇವಲ ಒಂದು ನಿಮಿಷ. ಅವರ  ಕಷ್ಟವನ್ನು ಗಮನಿಸಿದ ಹೇಮಂತ ಅವರನ್ನು ಬೋಗಿ ಬರುವ ಸ್ಥಳದಲ್ಲಿ ನಿಲ್ಲಿಸಿ ರೈಲು ಬಂದಮೇಲೆ ಓಡುತ್ತ  ಡ್ರೈವರ್ ಹತ್ತಿರ ಹೋಗಿ ಎರಡು ನಿಮಿಷ ಕಾಯಲು ವಿನಂತಿ ಮಾಡಿದ. ಪುಟ್ಟ ಹುಡುಗನ ಸಹಾಸ ನೋಡಿದ ಡ್ರೈವರ್ ನಗುತ್ತ ಆಗಲಿ ಎಂದ. ವೃದ್ಧ ದಂಪತಿಗಳನ್ನು ಸುರಕ್ಷಿತವಾಗಿ ಹತ್ತಿಸಿದ.

"ಮಗು ನಿನಗೆ ಒಳ್ಳೆಯದಾಗಲಿ,' ಎಂದು ಅಜ್ಜ ಆಶೀರ್ವಾದ ಮಾಡಿದರು.

ಅದೇ ಸಮಯದಲ್ಲಿ ಓರ್ವ ಭಿಕ್ಷುಕಿ ಆರು ತಿಂಗಳು ಮಗುವನ್ನು ಎತ್ತಿಕೊಂಡು ಬೋಗಿಯಲ್ಲಿ ಹತ್ತಲು ಸಹಾಯ ಮಾಡಿ ಜೇಬಿನಲ್ಲಿ ಇರುವ ರೂಪಾಯಿ ಇಪ್ಪತ್ತು ಆಕೆಗೆ ಕೊಟ್ಟ. 

ಅಂದು ಮಧ್ಯಾನ್ಹ ವೇಳೆ ಮುಗಿದು ಆಕಾಶದಲ್ಲಿ ಸೂರ್ಯ ಅಸ್ತಂಗತ ಆಗುವ ಸಮಯ ಸಮೀಪಿಸಿತು. ನಿಲ್ದಾಣದಲ್ಲಿ ಲೈಟ್ ಹಾಕುವ ಸಮಯ. ಹೇಮಂತ ನ ಮೊಬೈಲ್ ಫೋನ್ ರಿಂಗ್ ಮೇಲಿಂದ ಮೇಲೆ ಆಗುತ್ತ ಇತ್ತು.  ಆತ ಯಾರದು ಎಂದು ಗೊತ್ತಿದ್ದರೂ ನೋಡಿದ. 

"ಹೇಮಂತ ಬೇಗ ಮನೆಗೆ ಬಾರೋ.  ನಿನಗೆ ಹಸಿವೆ ಆಗಿಲ್ಲವೇ?." ಎಂದಳು ಅವನ ತಾಯಿ

"ಅಮ್ಮ, ಐದು ನಿಮಿಷದಲ್ಲಿ ಬರುವೆ." ಎಂದ

 ಮೊಬಾಯಿಲ್ ನಲ್ಲಿ ಆಗ  ಆತ ಸಮಯ ನೊಡಿದ. ಸಮಯ ಸಾಯ೦ಕಾಲ ಏಳು ಗಂಟೆ.  ತಡವಾಯಿತು ಎಂದು ಅವನು ಹೊರಡಲು  ಸೈಕಲ್ ಹತ್ತಿದ. ನಂತರ ವಿಚಾರಿಸಿದ  ಆಗ ಬರುವ ಇನ್ನೊಂದು ರೈಲು ನೋಡುವ ಇಚ್ಛೆ ಆಯಿತು. ಅದೇ ತಾನೇ ಬಂದ  ರೈಲು ಹೊರಡುವ ಸಿದ್ಧತೆಯಲ್ಲಿ ಇದ್ದಿತು. ಹೇಮಂತ  ನಿಂತು ಅದನ್ನು ನೋಡಿದ. ಅದು ನೀಲಿ ಮತ್ತು ಹಸಿರು ಬಣ್ಣದ ರೈಲು. ದಿಲ್ಲಿ ಕಡೆಗೆ  ಹೋಗುವದರಲ್ಲಿ ಇದ್ದಿತು. ಅದು ಬೆಂಗಳೂರು- ದಿಲ್ಲಿ ಹೋಗುವದು. ಅದು ಹೊರಡುವಾಗ ಶಬ್ದ ಜೋರಾಗಿ ಆಯಿತು. ರೈಲಿನಿಂದ ಆ ಕಡೆ ಹೊರಗೆ 

ಏನೋ ಎಸೆದ ಶಬ್ದ ಕೇಳಿಸಿತು. 

 ಏನು ಅದು? ಎಂದು ತಿಳಿದು ಕೊಳ್ಳುವ ತವಕ. 

ಅದು ಮರದ ಮೇಲೆ ಬಿದ್ದು ರಸ್ತೆಯ ಬದಿ ಇರುವ ಪೊದೆಯಲ್ಲಿ  ಬಿದ್ದಿತು. ಹೇಮಂತ ಅದನ್ನು ನೋಡಲು ಇಚ್ಚಿಸಿದ. ತನ್ನ ಸೈಕಲ್ ಅಲ್ಲಿಯೇ ನಿಲ್ಲಿಸಿ ಸಮೀಪದಲ್ಲಿ ಇರುವ ಪೊದೆಯ ಹತ್ತಿರ ಹೋದ. ಆಗಲೇ ಕತ್ತಲೆ ಆಗಿರುವದರಿಂದ ಪೊದೆಯ ಒಳಗೆ ಹೋಗಲು ಹೆದರಿಕೆ.  ನಂತರ ಅವನು ಅಲ್ಲಿಯೇ ನಿಂತು ಅಲ್ಲಿರುವ  ನಾಮಫಲಕ ನೊಡಿದ. ಅದರಲ್ಲಿ 'ರೇಲ್ವೇ ಆಸ್ತಿ ಪ್ರವೇಶ ನಿಷಿದ್ಧ'

‘ಓ, ನಾನು ಅಲ್ಲಿಗೆ ಹೋಗಲು ಆಗದು.’ ಎಂದು ಅಂದುಕೊಂಡ

ಆದರೆ ಬೋಗಿಯಿಂದ ಬಿದ್ದ ವಸ್ತು ಏನು? ಮತ್ತೆ ತಲೆ ಮೇಲೆ ಕೈ ಇಟ್ಟು ಕೊಂಡ. ಆದರೂ ಪೊದೆ ಒಳಗೆ ಇಣುಕಿದ. ಕತ್ತಲೆ ಆಗಿರುವ ದರಿಂದ ಅದನ್ನು ನೋಡಲು ಆಗಲಿಲ್ಲ. ತನ್ನಲ್ಲಿ ಇರುವ ಮೊಬೈಲ್ ಲೈಟ್ ಹಾಕಿದ. ಪೊದೆಯ ಒಳಗೆ ಇರುವ ವಸ್ತುವಿನ ಚಿತ್ರ ತೆಗೆದು ಕೊಳ್ಳುವ ಪ್ರಯತ್ನ ಮಾಡಿದ. ಕ್ಯಾಮೆರ ದಲ್ಲಿ ಫ್ಲ್ಯಾಶ ಇರುವದು ಅವನಿಗೆ ಗೊತ್ತು. ಅದರ ಮೂಲಕ ಆಲ್ಲಿ ಒಂದು ಬ್ರೀಫಕೇಸ್ ಇರುವದನ್ನು ಗಮನಿಸಿದ. 

ಅದರಲ್ಲಿ  ಏನು ಇರಬಹುದು?  ಎನ್ನುವ ತವಕ ಹೆಚ್ಚಾಯಿತು. 

ಆಗ ಅವನಿಗೆ ಯಾರೋ ಕೂಗಿದ ಶಬ್ದ ಕೇಳಿಸಿತು. 

"ಯಾರು, ಇಲ್ಲಿ ಏನು ಮಾಡುತ್ತಿರುವೆ?'    

ಆ ದಢೂತಿ ಮನುಷ್ಯ ಮರಗಳ ಒಳಗಿನಿಂದ ಪೊದೆಯವರೆಗೆ ನಡೆದು ಬ೦ದ. ಅವನು ನೋಡಲು ಹೆದರಿಕೆ ಬರುವ ಹಾಗೆ ಇದ್ದ.  ಅವನ ಜೊತೆಗೆ ಒಂದು ದೊಡ್ಡ ನಾಯಿ ಇತ್ತು. ಅವನಲ್ಲಿ ಟಾರ್ಚ್ ಇರುವದರಿಂದ  ಹೇಮಂತ ನ  ಮುಖ ದಮೇಲೆ ಬೆಳಕು ಹಾಕಿ, 

'ಯಾರು ನೀನು? ಎಂದ. 

ನಾಯಿ ಕೂಡ ಕೂಗುತ್ತ ಹೇಮಂತನ ಕಡೆಗೆ ಹೋಯಿತು.

"ಗಾಬರಿ ಆಗಬೇಡ. ನಾಯಿ ಏನೂ ಮಾಡುವದಿಲ್ಲ." ಎಂದ 

''ನಾನು ಹೇಮಂತ. ಯಾರಪ್ಪ ನೀನು? ಬೆಳಕನ್ನು ನನ್ನ ಕಣ್ಣಿನ ಮೇಲೆ ಹಾಕಬೇಡ.''

 'ಇಲ್ಲಿ ನೀನು ಏನು ಮಾಡು ತ್ತಿರುವೆ?' ಎಂದು ಕೇಳಿದ ಆ ದಢೂತಿ

'ನಾನು ರೈಲು ಗಳನ್ನು ನೋಡುತ್ತಾ ಇರುವೆ. ನೀನು ಯಾರು ಮೊದಲು ಹೇಳು?

ಬಾಲಕನ ಧೈರ್ಯ ನೋಡಿ ಅವನು ಚಕಿತನಾದ.

'ಬೇಗ ಮನೆಗೆ ಹೋಗು. ನೀನು ಇಲ್ಲಿಯೇ ನಿಂತರೆ ನಿನ್ನ ಜೀವಕ್ಕೆ ಅಪಾಯ." ಎಂದ 

ಹೇಮಂತ ಪೊದೆಯ ಕಡೆಗೆ ತೋರಿಸಿ,

'ಅಲ್ಲಿ ಒಂದು ಬ್ರೀಫಕೇಸ್ ಇರುವದು. ಅದರ ಒಳಗೆ ಏನಿದೆ?"

''ಮಕ್ಕಳು ಅದೆಲ್ಲ ಕೇಳಬಾರದು." ಎಂದು ಗದರಿಸಿದ ಆ ವ್ಯಕ್ತಿ.

ಆದರೂ ಪಟ್ಟು ಬಿಡದ ಹೇಮಂತ ಹೇಳುವವರೆಗೆ ಇಲ್ಲಿಂದ ಹೋಗುವದಿಲ್ಲ ಎಂದ.

 ನಾಯಿ ಕೂಗುತ್ತ ಹೇಮಂತನ  ಸಮೀಪ ಹೊಯಿತು. ಆಗ ಮತ್ತೆ ಮೊಬೈಲ್ ರಿಂಗ್  ಆಯಿತು. ತಾಯಿಯಿಂದ ಮತ್ತೊಂದು ಕರೆ. 'ಬೇಗೆ ಬಾರೋ ಮನೆಗೆ" ಎಂದಳು ಸಿಟ್ಟಿನಿಂದ.

 ನಾಯಿ ಕೂಗುವದನ್ನು ಹಾಗೆ ಮುಂದು ವರೆಸಿತು. 

'ಪ್ರಯಾಣಿಕರು ಖಾಲಿ ಆಹಾರ ಪೊಟ್ಟಣ ಪೊದೆಯಲ್ಲಿ ಎಸೆಯುವರು. ಮನೆಗೆ ಹೋಗು ಮತ್ತೆ ಇಲ್ಲಿ ಬರಬೇಡ." ಎಂದ ದಢೂತಿ 

''ಅದು ಬ್ರೀಫಕೇಸ್, ಆಹಾರ ಪೊಟ್ಟಣ ಅಲ್ಲ. ನೀನು ಸುಳ್ಳು ಹೇಳುತ್ತಿ." ಎಂದ ಹೇಮಂತ 

ಅಷ್ಟರಲ್ಲಿ ಪೋಲಿಸ್ ತಂಡ ಬಂದು ಆ ದಢೂತಿ ಮನುಷ್ಯನನ್ನು ಬಂಧಿಸಿಧರು. ಪೋಲಿಸರು ಪುಟ್ಟ  ಬಾಲಕ ಹೇಮಂತನ ಬೆನ್ನು ತಟ್ಟಿ "ಈ ಕದೀಮನನ್ನು ಮಾತನಾಡುತ್ತ ನಿಲ್ಲಿಸಿ ಒಳ್ಳೆಯ ಕೆಲಸ ಮಾಡಿದೆ. ನೀನು ಇಲ್ಲಿ ಇರದಿದ್ದರೆ ಅವನು ಬ್ರೀಫಕೇಸ್ ತೆಗೆದುಕೊಂಡು ಪರಾರಿ ಆಗುತ್ತಿದ್ದ." ಎಂದರು

ಓರ್ವ ಪೋಲಿಸ್ ಹೇಮಂತನನ್ನು ಮನೆಗೆ ಬಿಟ್ಟು ಬಂದ. ಬಾಲಕ ತನ್ನ ಸೈಕಲ್ ತೆಗೆದುಕೊಂಡು ಹೋಗುವದು ಮರೆಯಲಿಲ್ಲ.

ಮಾರನೇ ದಿವಸ ತಿಳಿದು ಬಂದ ಸುದ್ದಿ ಪ್ರಕಾರ ಬ್ರೀಫಕೇಸ್ ನಲ್ಲಿ ದುಬೈ ದಿಂದ ಬಂದ ಸುಮಾರು ರೂಪಾಯಿ ಐವತ್ತು ಲಕ್ಷ ಬೆಲೆ ಬಾಳುವ ಚಿನ್ನದ ಬಿಸ್ಕತ್ ಆ ಮನುಷ್ಯನ ಮೂಲಕ ನಿಗದಿತ ಸ್ಥಳಕ್ಕೆ ಸಾಗಿಸುವದಾಗಿತ್ತು. 

ಮರು ದಿವಸ ಹೇಮಂತನ ಧೈರ್ಯ ಹಾಗೂ ಅವನ ಸಹಾಸ ಲೋಕಲ್ ಪೇಪರ್ ನಲ್ಲಿ ಬಂದಿತು.

ಮುಂದೆ ಹದಿನೈದು ದಿವಸದ ನಂತರ ಹೇಮಂತನ ತಂದೆ ಸೇತುರಾಮ ಅವರಿಗೆ ಬಡ್ತಿ ಆಗಿ ಬೆಂಗಳೂರಿಗೆ ವರ್ಗ ವಾಯಿತು. ಸಾಯಂಕಾಲ ನಿಲ್ದಾಣದ ಆಫೀಸ್ ನಲ್ಲಿ ಸೇತುರಾಮ ಅವರ ವಿದಾಯ ಸಭೆಯಲ್ಲಿ ಸೇತುರಾಮ ಜೊತೆಗೆ  ಅವರ ಪತ್ನಿ ರುಕ್ಮಿಣಿ, ಸಿಗ್ನಲ್ ಮ್ಯಾನ್ ಅಬ್ದುಲ್, ಪೋರ್ಟರ್ ಮುನಿರಾಜು, ದೇವಸ್ಥಾನದ ಅರ್ಚಕ ಜಯಕೃಷ್ಣ, ಗುಡಿಸಲು ಟೀ ಸ್ಟಾಲ್ ನ ಶಿವಾನಂದ ಹಾಗೂ ಪುಟ್ಟ ಹೇಮಂತ ಭಾಗವಹಿಸಿದರು. ಸಭೆಯಲ್ಲಿ ಸೇತುರಾಮ ಅವರ ಬಗ್ಗೆ ಎಲ್ಲರೂ ಕಡಿಮೆ ಮಾತು ಆಡಿದರೆ, ಹೇಮಂತನ ಬಗ್ಗೆ ಹೆಚ್ಚು ಮಾತನಾಡಿದರು. ಅವರಲ್ಲಿ ಟೀ ಅಂಗಡಿ ಶಿವಾನಂದ ಹೇಮಂತನು  ಬಂಗಾರದ ಬಿಸ್ಕತ್ ಇರುವ ಬ್ರೀಫಕೇಸ್ ಹುಡುಕುವಲ್ಲಿ ಪೋಲಿಸರಿಗೆ ಸಹಾಯ ಮಾಡಿದ ಬಗ್ಗೆ ಹೇಳಿದ.  

ಹೇಮಂತ ಎದ್ದು ನೀವೆಲ್ಲರೂ ನನಗೆ ಆತ್ಮೀಯರು. ನಿಮ್ಮನ್ನು ಬಿಟ್ಟು ಹೋಗಲು ಮನಸ್ಸು ಆಗುವದಿಲ್ಲ ಎಂದು ಭಾವುಕನಾಗಿ ಜೋರಾಗಿ ಅತ್ತು ಬಿಟ್ಟ. ಆಗ ಎಲ್ಲರೂ ಒಬ್ಬೊಬ್ಬರಾಗಿ ಅವನನ್ನು ತಬ್ಬಿ ಕೊಂಡರು. ಎಲ್ಲರಿಗೂ ಹೇಮಂತನ ಮೇಲೆ ಇರುವ ಪ್ರೀತಿ ನೋಡಿ ತಂದೆ ತಾಯಿ ಕಣ್ಣಲ್ಲಿ ಆನಂದಭಾಷ್ಪ. ಟೀ, ಬಿಸ್ಕತ್ ಖರ್ಚು ಶಿವಾನಂದ ವಹಿಸಿದ. ಅಬ್ದುಲ್ ಅವರು ಸೇತುರಾಮ ಅವರಿಗೆ ಸಿಲ್ಕ ಶಾಲು ತಂದು ಅವರಿಗೆ ಹೊದಿಸಿದರು. ಜಯಕೃಷ್ಣ ಅವರು ಪುಟ್ಟ ಹೇಮಂತನಿಗೆ ಜನರಲ್ ನಾಲೇಜ್ ಲೇಟೆಸ್ಟ ಎಡಿಷನ್ ಬುಕ್ ಗಿಫ್ಟ್ ಕೊಟ್ಟರು. ಮುನಿರಾಜು ಅವರು ಅಮ್ಮನವರಿಗೆ ಫ್ರೇಮ ಹಾಕಿದ ದೊಡ್ಡ ಹನುಮಂತ ದೇವರ ಫೋಟೋ ಕೊಟ್ಟರು. ಸೇತುರಾಮ ಹಾಗೂ ರುಕ್ಮಿಣಿ ಅವರಿಗೆ ನಮಸ್ಕಾರ ಮಾಡಿದರು. ಕೊನೆಗೆ ಸೇತುರಾಮ ಅವರು ಕಳೆದ ನಾಲ್ಕು ವರ್ಷ ಪವನಪುರ ನಿಲ್ದಾಣದಲ್ಲಿ ತಮಗೆ ಆದ ಅನುಭವ ಸ್ಮರಿಸುವಾಗ ಅವರ ಕಣ್ಣಲ್ಲಿ ಒಂದೇ ಸಮನೆ ಕಣ್ಣೀರು. ಎಲ್ಲರ ಪ್ರೀತಿ ವಿಶ್ವಾಸಕ್ಕೆ ಚಿರ ಋಣಿ ಎಂದರು. ರುಕ್ಮಿಣಿ ಅವರು ಇಲ್ಲಿಯವರಿಗೆ ಎಲ್ಲ ತರಹದ ಸಹಕಾರ ಕೊಟ್ಟಿರುವದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದರು. ವಂದನಾರ್ಪಣೆಯೊಂದಿಗಳೊಂದಿಗೆ ಸಭೆ ಮುಕ್ತಾಯ ವಾಯಿತು.

ಪುಟ್ಟ ಹೇಮಂತ ನ ನೆನಪು ಅವರೆಲ್ಲರಿಗೂ ಹಾಗೆ ಉಳಿಯಿತು.



Rate this content
Log in