ಭೂತಾಯಿಯ ಮಡಿಲು
ಭೂತಾಯಿಯ ಮಡಿಲು
![](https://cdn.storymirror.com/static/1pximage.jpeg)
1 min
![](https://cdn.storymirror.com/static/1pximage.jpeg)
16
ಮಳೆರಾಯನ ಸಾನಿಧ್ಯವಿಲ್ಲದೆ
ಭೂತಾಯಿಯ ಮಡಿಲಾಯಿತು ಬರಡು.
ಪಯಿರು ಬೆಳೆಯಲು ನೀರು ಸಾಲದೆ
ಕಾಣಿಯಾಲನ ಬದುಕಾಯಿತು ಕುರುಡು.
ತಿನ್ನಲು ಅನ್ನವಿಲ್ಲದೆ ಶ್ರೀಸಾಮಾನ್ಯರ
ಜೀವನವಾಯಿತು ಅದೋಗತಿ.
ಕುಡಿಯಲು ಸಹ ನೀರು ಸಿಗದೆ ಬದುಕಿನ್ನು
ಪರದಾಟದ-ನರಳಾಟದ ಫಜೀತಿ.
ಪ್ರಕೃತಿಗೆ ದ್ರೋಹ ಬಗೆದರೆ ಇದೆ ಗತಿ
ಎಂದು ಅರಿಯಬೇಕು ಇನ್ನಾದರು.
ಅರಿಯದ್ದಿದ್ದರೆ ಪ್ರಕೃತಿಯ ಭಾರಿ
ವಿಕೋಪಕ್ಕೆ ಬಲಿಯಾಗಬೇಕು ನಾವೆಲ್ಲರು.
ಓ ನಿಸರ್ಗವೇ ಮುನಿಸು ತೊರೆದು ಮನ್ನಿಸು
ಮೂರ್ಖ ಜನರ ಕ್ರೌರ್ಯ ಕೃತ್ಯಗಳನ್ನು.
ದಯಮಾಡಿ ಮಳೆರಾಯನ ದಯಪಾಲಿಸಿ
ಭರ್ತಿಮಾಡು ಭೂತಾಯಿಯ ಮಡಿಲನ್ನು.