ಪ್ರಶಾಂತ್ ಕುಸುಮ ಓಂಕಾರ
ಪ್ರಶಾಂತ್ ಕುಸುಮ ಓಂಕಾರ

1 min

41
"ಕೇಶವ ಒಬ್ಬ"
ಚಿಂತಾಲೋಕದ ಚಿಂತಾ ಜನಕ,
ಮಾಯಾ ಲೋಕದ ಮನೋ ಮಾನಕ,
ಮಾತಿನಲ್ಲಿ ನಯವಂಚಕ,
ನೋಟದಲಿ ನರ ಹಂತಕ,
ಕಾಯಕದಲ್ಲಿ ಹಿತವಂಚಕ,
ಅಭಿರುದ್ದಿ ಪಥದಲ್ಲಿ ಪಥ ಸಂಚಾಲಕ,
ನಡಿಗೆಯಲ್ಲಿ ದಿಕ್ಪಾಲಕ,
ಹಾವ ಭಾವಗಳಲಿ ಹಾಸ್ಯಸ್ವಾದಕ,
ವಚನ ಸಾಹಿತ್ಯದಲಿ ಸಾಹಿತ್ಯಿಕ,
ವಚನ ಪಠೀಸುವುದರಲ್ಲಿ ಬೌದ್ಧಿಕ,
ಎದುರಾಳಿಗಳ ಎದುರು ದಯದ ಧರ್ಮ ಪಾಲಕ,
ಕ್ರೂರೀಗಳ ಎದರು ಯಮಪಾಲಕ,
ನಗುವಿನಲಿ ನಂರತೆಯ ಸವಿಪಾಲಕ,
ಘರ್ಜಿಸುವ ವಿಷಯ ಬಂದರೆ ಸಿಂಹದ ಪಾಲಕ,
ಬೇಟೆ ಆಡುವುದರಲಿ ರಣಕೇಕೆಯ ರಣಧೋತಕ,
ಜಯಗಳಿಸುವಲಿ ಪಾಂಡವರ 3 ನೆಯ ಪಾರ್ಥಕ,
ನಯವಿದ್ದರೆ ವಿನಯ,
ದಯಾ ವಿದ್ದರೇ ಕರುಣೆ,
ನಯ ವಿಲ್ಲದೇ,ನಿರ್ದಯಿ ಯಾದರೇ,
ನರ ಮಾನವರು ಯಾರಿದ್ದರು ಸರಿಯೇ,
ಕೇಶವನ ಬಳಿ ಕರೆ ತರಲು ನಾ ಸಿದ್ದ,
ಇದಕ್ಕಾಗಿ ನನ್ನ ಬಲಿದಾನ ವಾದರು ನಾ ಬದ್ದ...ಬದ್ದ.
ಸರಿ ಇದ್ದರೆ ಸ್ವೀಕರಿಸಿ ಮಾನವ,
ತಪ್ಪಿದ್ದರೆ ಸರಿಪಡಿಸಿ ನಡೆಯೋ ಕೇಶವ.