“
ಕೋಪ ಬಂದಾಗ ಕಾಳಿಯಾಗುವೆ
ಶಾಂತವಿದ್ದಾಗ ಸದ್ಗುಣ ಸಂಪನ್ನೆಯೇ .
ಎಲ್ಲರನ್ನೂ ಸಮಾನವಾಗಿ ನೋಡಿದೆ .
ಎಲ್ಲರೂ ನನ್ನವರೇ ಎಂದೆ.
ನಮಗಾಗಿ ಎಷ್ಟೋ ತ್ಯಾಗಗಳ ಮಾಡಿದೆ
ನೋವು ನಲಿವುಗಳ ಸಮನಾಗಿ ತೂಗಿದೆ.
ಅದನ್ನೇ ನಮಗೂ ಬಿತ್ತಿದೆ.
ನಮ್ಮ ತಪ್ಪುಗಳ ಮನ್ನಿಸಿಮ್ಮಾ.
ಹೊಸ ತಪ್ಪುಗಳನ್ನು ಸ್ವೀಕರಿಸಮ್ಮಾ.
ಅದೇ ತಾನೇ ನೀನು
ಇದೇ ತಾನೇ ನಾವು!
ಹುಟ್ಟು ಹಬ್ಬದ ಶುಭಾಶಯಗಳು ಅವ್ವಾ.
ಇಂತಹ ನೂರಾರು ಖುಷಿಯ ದಿನಗಳು ನಿನ್ನವಾಗಲಿ.
”