ಮಸ್ತಿಷ್ಕಕ್ಕೆ ಕೆಲಸವಿಲ್ಲದೊಡೆ
ಎಸಗುವುದು ಎಡವಟ್ಟುಗಳನು.
ನಿನಗೆ ಸಲ್ಲಿಸಲು ನನ್ನದೆಂಬುದು
ಏನಿಲ್ಲ.
ಎಲ್ಲವೂ ಅವನಿತ್ತ ಕೊಡುಗೆಯಷ್ಟೆ. ಪಡೆಯುವ
ಅರ್ಹತೆಯನಷ್ಟೇ ನೀ ಗಳಿಸಬೇಕಾದದ್ದು.
ಬದುಕು ಮೂರು ದಿವಸ
ಅದಕು ನೂರು ಕನಸ
ಅನುದಿನವೂ ಗೆಲ್ಲು ಮನಸ👍👍👍👍
ಜಯಶ್ರಿ ಹಳ್ಳೂರ.
ಸರಣಿಗೊಂದರಂತೆ ಎಡತಾಕುವ ಚಿಂತೆಗಳನು ಸಂಭಾಳಿಸುವುದರಲ್ಲೇ
ಜೀವನ ಮುಗಿದುಹೋಯಿತಲ್ಲಾ...😌😌😌😌😌
ಜಯಶ್ರೀ ಹಳ್ಳೂರ.
ಬದುಕು ಮೂರು ದಿವಸ
ಅದಕು ನೂರು ಕನಸ
ಅನುದಿನವೂ ಗೆಲ್ಲು ಮನಸ👍👍👍👍
ಜಯಶ್ರಿ ಹಳ್ಳೂರ.
IF I WISH TO GET INTO ONE'S SHOES, I MUST GET OUT OF MY SHOES FIRST.
Jaishree Hallur.
ಕನವರಿಸೋಕೂ ಪುರುಸೊತ್ತಿಲ್ಲದಂತೆ
ಕಾಡುವೆಯೇಕೆ ಹುಡುಗೀ
ಮಗ್ಗುಲು ಬದಲಿಸಲೂ ಬಿಡದೆ ಒದ್ದಾಡಿಸಿದೆ
ಅರೆ ನಿದ್ದೇಲಿ ನಿನ್ನನೇ ಹೊದ್ದು ಮಲಗಿದಂತೆ ಮುದ್ಮುಂಜಾನೆ.
ಜಯಶ್ರಿ ಹಳ್ಳೂರ
ಬರೆಯಲಾಗದ ಒಳಗನ್ನು
ಬರೆಯಲೇ ಬೇಕೆಂದಾದರೆ,
ಬರೆಯುವ ಆಕಾಂಕ್ಷೆಯಲ್ಲಿ
ಕೆಲವನ್ನು ಅಲ್ಲೇ ಕೈಬಿಡಬೇಕೆಂಬದು
ಅಷ್ಟೇ ಸತ್ಯ.
ಕವಿಗೆ ಲೇಖನಿಯೇ ಅಸ್ತ್ರ.
ಆದರೆ, ಲೇಖನಿಗೆ ಕವಿಯ ಕನಸುಗಳೇ ಅಸ್ತ್ರ.
ಒಂದಕ್ಕೊಂದು ಹೊಂದಿಕೊಂಡಾಗಲೇ ಕಾವ್ಯ ಸೃಷ್ಟಿ.
😊😊😊
💥💥💥