ನಮ್ಮನ್ನು ಪ್ರೀತಿಸುವ ಹೃದಯದ ಒಳಗಣ್ಣಿಗೆ ಮಾತ್ರ ನಮ್ಮ ಅಂತರಾಳದ ನೋವು ಅರಿವಾಗಲು ಸಾಧ್ಯ.
✍🏻 ಪ್ರಜ್ಞಾ ರವೀಶ್.
ಕೈ ಜಾರಿದ ಕನಸುಗಳನ್ನು ನೆನೆದು, ಕೊರಗುತ್ತಾ ಕೂರುವ ಬದಲು, ಪಾಲಿಗೆ ಬಂದದ್ದೇ ಪಂಚಾಮೃತವೆಂದು, ಇಂದಿನ ದಿನವೇ ಆ ದೇವರಿತ್ತ ಕೊಡುಗೆಯೆಂದು ತಿಳಿದು, ಖುಷಿಯಿಂದ ಇರುವುದೇ ನೆಮ್ಮದಿಯಲ್ಲವೇ?!
ಯಶಸ್ಸಿನತ್ತ ಇಟ್ಟ ಒಂದು ಹೆಜ್ಜೆಯನ್ನು ಎಂದಿಗೂ ಹಿಂದೆಗೆಯದಿರು, ಒಂದು ವೇಳೆ ನೀ ಇಟ್ಟ ಹೆಜ್ಜೆಯನ್ನು ಹಿಂದೆಗೆದದ್ದೇ ಆದಲ್ಲಿ ಅದು ನಿನ್ನ ಹೇಡಿತನವನ್ನು ತೋರಿಸುತ್ತದೆ.
✍🏻 ಪ್ರಜ್ಞಾ ರವೀಶ್.