ಕವಯತ್ರಿ, ಲೇಖಕಿ
Share with friends"ನಂಬಿಕೆ ದ್ರೋಹ ಮಾಡಿದವರ ಮುಖವಾಡ ಬಯಲಾಗುವುದು ಸಮಯ ಬಂದಾಗ,ಅದ ನೋಡಲು ನಾವಿರಬೇಕು ಅಷ್ಟೇ" ಶಿವಲೀಲಾ ಶಂಕರ ಶಿವಲೀಲಾ ಶಂಕರ
ನಂಬಿಕೆಗೆ ಪಾತ್ರರಾದವರು ನಂಬಿಕೆ ಕಳೆದುಕೊಳ್ಳಲು ಆರಂಭಿಸಿದರೆ ಬದುಕು ಇದ್ದು ಸತ್ತಂತೆ.ಜಗತ್ತು ಅವನತಿಯತ್ತ ಸಾಗಿದಂತೆ...
ಬೆನ್ನ ಹಿಂದೆ ನಡೆಯೋ ಸಂಚುಗಳಿಗೆ,ಮರೆಮಾಚಿದ ಮುಖವಾಡಗಳಿಗೆ ಬೆಚ್ಚಿ ಬೀಳುವ ಅಗತ್ಯವಿಲ್ಲ,ಕಾರಣ ಅವುಗಳಿಗೆ ಆಯಸ್ಸು ಕಡಿಮೆ.ಮೇಲೊಬ್ಬನ ಕಣ್ಣು ತಪ್ಪಿಸಿ ಬದುಕಲು ಸಾಧ್ಯವಿಲ್ಲ.
ಲಾಭ,ನಷ್ಟದ ಬಗ್ಗೆ ಚಿಂತಿಸುವುದಕ್ಕಿಂತ,ನಂಬಿಕೆ, ವಿಶ್ವಾಸಗಳು ಎಷ್ಟು ಬೇರುಬಿಟ್ಟಿವೆ ಎಂಬುದನ್ನು ಯೋಚಿಸಬೇಕು. ಅಂದಾಗ ಬದುಕನ್ನು ನಾವು ಎಷ್ಟು ಹತ್ತಿರದಿಂದ ನೋಡಿದ್ದೆವೆ ಎಂಬುದು ಅರಿವಾಗುತ್ತದೆ.
ಲಾಭ,ನಷ್ಟದ ಬಗ್ಗೆ ಚಿಂತಿಸುವುದಕ್ಕಿಂತ,ನಂಬಿಕೆ, ವಿಶ್ವಾಸಗಳು ಎಷ್ಟು ಬೇರುಬಿಟ್ಟಿವೆ ಎಂಬುದನ್ನು ಯೋಚಿಸಬೇಕು. ಅಂದಾಗ ಬದುಕನ್ನು ನಾವು ಎಷ್ಟು ಹತ್ತಿರದಿಂದ ನೋಡಿದ್ದೆವೆ ಎಂಬುದು ಅರಿವಾಗುತ್ತದೆ.
"ನಂಬಿಕೆ" ಎಂಬ ಮೂರಕ್ಷರಕೆ ಇರುವಷ್ಟು ಬೆಲೆ,ಕಳೆದುಕೊಂಡ ಮೇಲೆ ಸಿಗದು.ವ್ಯಕ್ತಿ ಸಿಗಬಹುದು ಆದ್ರೆ ನಂಬಿಕೆ ಮಣ್ಣುಪಾಲಾಗಿರುತ್ತೆ. ನಂಬಿಕೆಗೆ ದ್ರೋಹ ಮಾಡಬೇಡಿ"
ಬದುಕಿನ ಬಣ್ಣಗಳು ಕಲಿಸೋ ಪಾಠದ ಮುಂದೆ ಎಲ್ಲವೂ ಶೂನ್ಯ..... ಅರಿತವನಿಗೊಂದೆ ಗೊತ್ತು ಬಣ್ಣದ ಭಾಗ್ಯ.... ಶಿವಲೀಲಾ ಹುಣಸಗಿ ಯಲ್ಲಾಪುರ