ಸತ್ಯದ ಅರಿವು ಇರದೆ, ಬೇಕಾಬಿಟ್ಟಿ ಮಾತನಾಡುವವರ ಜೊತೆಗೆ ವಾದಕ್ಕೆ ಇಳಿಯಕೂಡದು.. ಸಮಯ,ಸಂಯಮ ಎರಡೂ ವ್ಯರ್ಥ... ✍️ ವಿಜಯಲಕ್ಷ್ಮಿ ಅಳ್ಳೊಳ್ಳಿ
ಕೆಲವೊಮ್ಮೆ ನಮ್ಮವರಿಗಾಗಿ ನಮ್ಮ ಇಚ್ಛೆಗಳನ್ನು ಬದಿಗೊತ್ತಿ, ತ್ಯಾಗ ಮಾಡಬೇಕಾಗುತ್ತದೆ.. ಇಚ್ಛೆಗಳನ್ನು ಈಡೇರಿಸಿಕೊಳ್ಳುವ ಭರದಲ್ಲಿ ಅಹಂಕಾರಿಣಿ ಎನ್ನುವ ಪಟ್ಟವನ್ನು ಪಡೆದುಕೊಳ್ಳಬೇಕಾಗುವುದು... ವಿವೇಕದಿಂದ ವರ್ತಿಸಿ.. ✍️ ವಿಜಯಲಕ್ಷ್ಮಿ ಅಳ್ಳೊಳ್ಳಿ
'ಸವಾಲುಗಳು' ಜೀವನದಲ್ಲಿ ಬರುವ ಕಷ್ಟಗಳು ಸವಾಲುಗಳು ಇದ್ದಂತೆ; ಅವುಗಳನ್ನು ಎದುರಿಸಿ ನಿಂತಾಗ ಜೀವನ ಸುಖಮಯ ವಂತೆ... ✍️ವಿಚಂಅ
'ಚರ್ಚೆ' ತಪ್ಪು ಗ್ರಹಿಕೆಗಳನ್ನು, ಸಮಚಿತ್ತದಿಂದ ಚರ್ಚಿಸಿ ಸರಿಪಡಿಸಿಕೊಳ್ಳಬೇಕು... ಅಂದಾಗ ನಿಜವರಿತು ನೆಮ್ಮದಿಯ ದಿನದೂಡಬಹುದು... ✍️ವಿಚಂಅ
*ಮನಸ್ಥಿತಿ* ನಮ್ಮ ಸದ್ಯದ ಪರಿಸ್ಥಿತಿಗೆ, ನಮ್ಮ ಮನಸ್ಥಿತಿಯೆ ಕಾರಣ ಹೊರತು ಬೇರೆಯವರ ಪರಿಸ್ಥಿತಿ,ಅವರ ಮನಸ್ಥಿತಿ ಕಾರಣವಲ್ಲ.... ✍️ವಿಚಂಅ
ಅದೃಷ್ಟ ಅದೃಷ್ಟ ಇದೆಯೆಂದು,ಶ್ರಮ ಪಡದೆ ಕೂತರೆ ಏನನ್ನು ಮಾಡಲು ಸಾಧ್ಯವಿಲ್ಲ. ಶ್ರಮ ಪಟ್ಟರೆ ಅದೃಷ್ಟ ತಾನೆ ಕೈ ಹಿಡಿಯುವುದು... ✍️ವಿಚಂಅ