ನಾನು ಸ್ವ ಉದ್ಯೋಗಿಯಾಗಿದ್ದು ಹವ್ಯಾಸಿ ನಟನಾಗಿ, ಬರಹಗಾರನಾಗಿ ಮತ್ತು ರೇಕಿ ಚಿಕಿತ್ಸಕನಾಗಿ ಕೂಡ ಕೆಲಸವನ್ನು ನಿರ್ವಹಿಸುತ್ತಿದ್ದೇನೆ.
Share with friendsಸೃಷ್ಟಿಯಲ್ಲಿ ದೇವರು ಎಂದಿಗೂ ಕೆಲಸವನ್ನು ಮಾಡುವುದಿಲ್ಲ, ಆದರೆ ಇದೇ ಸೃಷ್ಟಿಯಲ್ಲಿ ಮನುಷ್ಯ ಎಂದಿಗೂ ಸುಮ್ಮನಿರುವುದಿಲ್ಲ.
ಕಣ್ಣಿಗೆ ಕಂಡಿದ್ದನ್ನೇ ನಂಬುವ ಈ ಕಾಲದಲ್ಲಿ ಕಾಣದೇ ಇರುವ ಅಸಲು ಸತ್ಯವನ್ನು ಎಷ್ಟು ಕೂಗಿ ಹೇಳಿದರೂ ಯಾರಿಗೂ ಕೇಳಿಸುವುದಿಲ್ಲ.
ಯಾವುದೇ ಸಂದರ್ಭದಲ್ಲಿ ಗೊಂದಲಕ್ಕೆ ಅವಕಾಶವನ್ನು ಕೊಡಬೇಡಿ, ಕಾರಣ ಯಶಸ್ಸಿನ ಪಯಣದಲ್ಲಿ ಎದುರಾಗುವ ಮೊದಲ ಎದುರಾಳಿ ಕೂಡ ಆಗಿದ್ದು ಇದನ್ನು ಎದುರಿಸದ ಹೊರತು ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ, ಬೇಕಾದರೆ ಪ್ರಯತ್ನಿಸಿ ನೋಡಿ ನಿಮಗೆ ಸತ್ಯ ತಿಳಿಯುತ್ತದೆ.
ಯಾರು ಯಾರನ್ನು ಉನ್ನತ ಮಟ್ಟಕ್ಕೆ ತರುವುದಾಗಲಿ ಅಥವಾ ಅವನತಿಗೆ ತಳ್ಳುವುದಾಗಲಿ ಮಾಡಲು ಸಾಧ್ಯವಿಲ್ಲ. ಅವರವರ ಯೋಚನೆ, ಕೆಲಸಗಳೇ ಉನ್ನತಿಗೆ ಅಥವಾ ಅವನತಿಗೆ ಕಾರಣವಾಗಿರುತ್ತವೆ. ನಿಮಗೆ ಇದರ ಬಗ್ಗೆ ತಿಳಿಯುವ ಕುತೂಹಲ ಇದ್ದರೆ ಒಂದು ಬಾರಿ ಆಲೋಚಿಸಿ ನೋಡಿ ಸತ್ಯ ನಿಮಗೆ ತಿಳಿಯುತ್ತದೆ. ಏಕೆಂದರೆ ಸತ್ಯವೇ ಶಾಶ್ವತ.