ಸಾಧನೆ
ಸಾಧನೆ
ಕುಗ್ರಾಮವೊಂದರಲ್ಲಿ ಹುಟ್ಟಿ ಬೆಳೆದ ಸಂದೇಶ್ ,
ಪಕ್ಕದ ನಗರದಲ್ಲಿ ಕಾಲೇಜು ಶಿಕ್ಷಣ ಪಡೆದು,ಪದವೀಧರರಾದ. ಮೂಲ ಸೌಲಭ್ಯಗಳಿಂದ ವಂಚಿತವಾಗಿರುವ ತನ್ನ ಹಳ್ಳಿಗೆ, ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕೆಂದು ನಿರ್ಧರಿಸಿದ ಸಂದೇಶ್, ಸ್ವಯಂ ಪ್ರೇರಿತನಾಗಿ ಗ್ರಾಮಸ್ಥರನ್ನು ಒಗ್ಗೂಡಿಸಿ, ಸರ್ಕಾರದೊಂದಿಗೆ ವ್ಯವಹರಿಸಿ, ತನ್ನ ಹಳ್ಳಿಗೆ ಒಂದೊಂದೇ ಮೂಲಸೌಲಭ್ಯಗಳಾದ, ವಿದ್ಯುತ್, ಕುಡಿಯುವ ನೀರು ,ಸ್ಯಾನಿಟರಿ, ಉತ್ತಮ ಶಿಕ್ಷಣ ಎಲ್ಲವನ್ನೂ ಕಲ್ಪಿಸಿದನು. ಹಲವು ವರ್ಷಗಳ ನಂತರ, ಅವನು ಆ ಹಳ್ಳಿಗೆ ಜನಪ್ರಿಯ ನಾಯಕನಂತಾದನು. ಅವನ ಬೆನ್ನಿಗೆ ಹಳ್ಳಿಗರು ನಿಂತರು ಮತ್ತು ಅವನನ್ನು ಚುನಾವಣೆಗೆ ಸ್ಪರ್ಧಿಯಾಗಿ ನಿಲ್ಲಿಸಿದರು.
ಆದರೆ ಹಣವಿಲ್ಲದ ಅವನು ಚುನಾವಣೆಯಲ್ಲಿ ಸೋತಾಗ, ಧೃತಿಗೆಡದೆ ತನ್ನ ಚಟುವಟಿಕೆಗಳನ್ನು ಮುಂದುವರಿಸಿ, ತನ್ನ ಸಮಾಜ ಸೇವೆಯನ್ನು ಮುಂದುವರಿಸುತ್ತಾ ಬಂದನು.
ಅವನ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ ಕೇಂದ್ರ ಸರ್ಕಾರ ಅವನನ್ನು ಗುರುತಿಸಿ, ಅವನಿಗೆ
ಉನ್ನತವಾದ ಪದ್ಮಭೂಷಣ ಪ್ರಶಸ್ತಿ ನೀಡಿ, ಗೌರವಿಸಿತು. ಸಂದೇಶ್ ಸಾಧನೆಗೆ ತಕ್ಕ ಯಶಸ್ಸು ಅವನನ್ನು ಅರಸುತ್ತಾ ಬಂದಿತು.